ಬುಧವಾರ, ಡಿಸೆಂಬರ್ 30, 2009

ಮುಗಿಯದು ಮುತ್ತಿನ ಹಾರದ ಕವನ

ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಬೇಸಿಗೆಯಲಿ ಆ ಸೂರ್ಯ ...ಭೂತಾಯಿಯ ಸುಡುತಾನೆ
ಪ್ರೇಮಕು ಅಗ್ನಿಪರೀಕ್ಶೆ.ಸುಳಿವಿಲ್ಲದೆ ಕೊಡುತಾನೆ
ಬೇಡ ಯೆಂದರೆ ನಾವು..ಸುಡದೆ ಇರುವುದೆ ನೋವು
ಸರಿಯೊ ಕಾಲದ ಜೊತೆಗೆ...ವ್ಯಸನ ನಡೆವುದು ಹೊರಗೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಮೇಘವೊ ಮೇಘವು...ಮುಂಗಾರಿನ ಮೇಘವು
ಮೇಘವೊ ಮೇಘವು...ಇಂಗಾರಿನ ಮೇಘವು
ಹನಿ ಹನಿ ಹನಿ ಹನಿ ಛಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡುಗುಡು ಗುಡುಗುಡು ಗುಡುಗೋ ಗುಡುಗಿನ
ಫಳಫಳ ಮಿನ್ಛುವ ಸಿಡಿಯುವ ಸಿಡಿಲಿನ


ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ


ಸಿಡಿಯುವ ಭೂಮಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮ್ರುತವರ್ಶಿನಿ


ವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆ



ವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆ
ನದಿಗಳು ಝರಿಗಳು ಗಿಡಗಳು ಪೊದೆಗಳು..ಗಾಯನ ಮಾಡಿದವು


ಋತುಗಳ ಚಕ್ರವು ತಿರುಗುತ ಇರಲು
ಕ್ಶಣಿಕವೆ ಕೋಗಿಲೆ ಗಾನದ ಹೊನಲು


ಬಿಸಿಲೋ ಮಳೆಯೊ...ಚಿಗುರೋ ಹಿಮವೊ
ಅಳುವೋ ನಗುವೋ..ಸೋಲೋ ಗೆಲುವೋ
ಬದುಕೆ ಪಯಣ...ನಡೆಯೆ ಮುಂದೆ
ಒಲವೆ ನಮಗೆ..ನೆರಳು ಹಿಂದೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ




ಡಾ. ವಿಷ್ಣುವರ್ದನ್ ಆತ್ಮಕ್ಕೆ ಶಾಂತಿ ಸಿಗಲಿ


ಮಂಗಳವಾರ, ಡಿಸೆಂಬರ್ 15, 2009

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ"

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ".

ಗಣಕದಲ್ಲಿ ಕನ್ನಡವನ್ನ ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ. ಇದೇ ಸಾಲಿನಲ್ಲಿ ಇನ್ನೊಂದು ಹೊಸ ಸೇರ್ಪಡೆ ಈಲೋಹಿತಂತ್ರಾಂಶ.
ಯಾಕಪ್ಪಾ ಗೌಡ ಇನ್ನೊಂದು ಹೊಸ ತಂತ್ರಾಂಶ? ಎಂದು ಪ್ರಶ್ನಿಸಿದರೆ, ನನ್ನ ಬಳಿ ಹೆಚ್ಚೇನು ಸಮಾಜಾಯಿಷಿ ಸಿದ್ದವಿಲ್ಲ.
ಇದು ಕೇವಲ ಆಸಕ್ತಿಯಿಂದ ಆರಂಭಿಸಿದ project. ಬ್ಲಾಗ್ ಸ್ನೇಹಿತರ ಸಲಹೆ ಹಾಗೂ ಪ್ರೋತ್ಸಾಹದ ಜೊತೆಗೆ ನನ್ನ ಹಲವು ರಾತ್ರಿಗಳ ನಿದ್ದೆ ಹಾಗೂ ಕೆಲವು ವಾರಾತ್ಯಗಳ ಸಂಪೂರ್ಣ ಅರ್ಪಣೆಯಿಂದ ಈ ತಂತ್ರಾಂಶ ಇಷ್ಟರ ಮಟ್ಟಿಗೆ ಸಿದ್ದವಾಗಿದೆ.
ಇದನ್ನು ಉಚಿತ ತಂತ್ರಾಂಶವನ್ನಾಗಿಸಲು ಇಚ್ಚಿಸುತ್ತಿದ್ದೇನೆ.
ಲೋಹಿತಂತ್ರಾಂಶದ ವಿಶೇಷತೆಗಳು
೧. ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದುಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ.
೨. LINUX ನಲ್ಲಿಯೂ ಈ ತಂತ್ರಾಂಶವನ್ನ ಬಳಸ ಬಹುದು.
೩. ಬರಹ ಹಾಗೂ ನುಡಿ, ಎರ್ಡೂ ಮಾದರಿಯ ಕೀಲಿಮಣೆ ಯಲ್ಲಿ ಬರೆಯ ಬಹುದು.
೪. ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು
೫. ಪದಪೂರ್ತಿ ಸಹಾಯ (auto - completion) ವಿರುತ್ತೆ.
೬.ಅಕ್ಷರಗಳನ್ನ ಅಲಂಕರಿಸ ಬಹುದು, ಹಾಗೆ ಅಲಂಕರಿಸಿದ ಕಡತಗಳನ್ನ HTML ಆಗಿ ಉಳಿಸಿಕೊಳ್ಳ ಬಹುದು
 ಎಲ್ಲಾ ಕಡೆ ಸಂಪೂರ್ಣವಾಗಿ ಕೇವಲ ಯೂನಿಕೋಡ್ (UTF-16) ಮಾತ್ರ ಬಳಸಲಾಗಿದೆ
. ANSI ಕನ್ನಡವನ್ನ ಬೆಂಬಲಿಸಲಾಗಿದೆ. (ಅಂದರೆ ಬರಹದ BRH ಕಡತಗಳನ್ನ ತೆರೆಯಬಹುದು)
. Table ಗಳನ್ನ, ಚಿತ್ರಗಳನ್ನ ಸೇರಿಸ ಬಹುದು.



ವಿಶೇಷತೆಗಳ ಸಂಕ್ಷಿಪ್ತ ವಿವರಣೆ
LINUX ಬಳಕೆದಾರರು ಸಹ ಈ ತಂತ್ರಾಂಶವನ್ನ ಬಳಸಬಹುದು. ನಿಮ್ಮ LINUX ಗೆ ತಕ್ಕ ಭಿನ್ನ package ನೀಡಲಾಗುವುದು.

ಕೆಲವರು "ಬರಹ" ದ ಮಾದರಿಯನ್ನ, ಮತ್ತೆ ಇನ್ನು ಕೆಲವರು "ನುಡಿ" ಮಾದರಿಯನ್ನ ಅನುಸರಿಸುತ್ತಾರೆ. ಎರ್ಡೂ ಮಾದರಿಯ ಕೀಲಿ ಮಣೆ ಸಾಕಷ್ಟು ಪ್ರಚಾರ ದಲ್ಲಿದೆ. ಆದ್ದರಿಂದಲೇ ಎರ್ಡೂ ಮಾದರಿಯ ಮಣೆಗಳನ್ನ ಅಳವಡಿಸಲಾಗಿದೆ.
ನೀವು ಕೀಲಿಮಣೆ ಮಾದರಿಯನ್ನ switch ಮಾಡಿಕೊಳ್ಳಲು, ಮೇಲೆ ನೀಡಿರುವ "ಕಗಪ" ಅಥವ "ಕ್" ಎಂದಿರುವ ಗುಂಡಿಯನ್ನ ಒತ್ತಿ. ನಡುವೆ ಯಾವುದೇ ಗಳಿಗೆಯಲ್ಲಿ ನಿಮಗೆ ಬೇಕೆನಿಸಿದಾಗ ಬದಲಿಸಿಕೊಳ್ಳ ಬಹುದು.
PDF ಕಡತಗಳು ತುಂಬಾ portable, ಈ ಬಗ್ಗೆ ನಿಮಗೂ ತಿಳಿದಿರುತ್ತೆ, ಈ ರೀತಿಯ PDF ಕಡತಗಳನ್ನ ರಚಿಸಲು, ನೀವು ಮೇಲೆ ನೀಡಿರುವ "PDF" ಗುಂಡಿಯನ್ನ ಒತ್ತಿ. ಅದರಲ್ಲಿ ಹೊಸ ಕಡತದ ಒಂದು ಹೆಸರನ್ನ ಆಯ್ಕೆ ಮಾಡಿ. ನಂತರ "OK" ಒತ್ತಿದರೆ ಸಾಕು ನಿಮ್ಮ PDF ಕಡತ ಸಿದ್ದ.

ಪದಪೂರ್ತಿ ಸಹಾಯ, ಏನಿದು ಅಂತೀರ? ಒಂದು ಉದಾಹರಣೆ ಕೊಡ್ತೀನಿ.
ನೀವು ಈಗ "ಪ್ರದರ್ಶನ" ಎಂದು ಬರೆಯಲು ಇಚ್ಚಿಸುವಿರಿ ಎಂದು ಇಟ್ಟು ಕೊಳ್ಳಿ. ಅದಕ್ಕೆ ನೀವು ಮೊದಲು "ಪ್ರ" ಎಂದು ("pra") ಬರೆಯುತ್ತೀರಿ, ಆಗ, ಕೂಡಲೇ "ಪ್ರ" ಅಕ್ಷರದ ಮುಂದೆ ನಿಮಗೆ ಒಂದು ಸಹಾಯ ಕಿಡಕಿ ತೆರೆಯುತ್ತೆ. ಅದರಲ್ಲಿ "ಪ್ರ" ಅಕ್ಷರದಿಂದ ಆರಂಬವಾಗುವ ಅನೇಕ ಪದಗಳನ್ನ ಪಟ್ಟಿ ಮಾಡಲಾಗಿರುತ್ತೆ. ಆ ಪಟ್ಟಿಯಲ್ಲಿ "ಪ್ರದರ್ಶನ" ಎಂಬ ನಿಮ್ಮ ಆಯ್ಕೆ ಕೂಡಲೇ ಕಂಡು ಬಂದಲ್ಲಿ ಆ ಪದವನ್ನ high light ಮಾಡಿ ಕೊಳ್ಳಿ, Up ಅಥವ Down arrow ಕೀಲಿಯನ್ನ ಒತ್ತಿ.

ನಂತರ Tab ಅಥ್ವ Enter ಕೀಲಿಯನ್ನ ಒತ್ತಿ. ಈಗ "ಪ್ರದರ್ಶನ" ಪದ ಕೂಡಲೇ ಬರುತ್ತೆ. ಪ್ರದರ್ಶನ ಅಲ್ಲದೆ, ಬೇರೆ ಪದಗಳು ಬೇಕು ಅನ್ನಿಸಿದರೆ, ಸುಮ್ಮನೆ ಬರೆಯುತ್ತ ಹೋಗಿ, ಹತ್ತಿರದ ಪದಗಳ ಪಟ್ಟಿ ತಾನಾಗೆ ತೆರೆಯುತ್ತೆ, ಬೇಕೆಂದರೆ ಆಯ್ಕೆ ಮಾಡಿ ಇಲ್ಲ ಅಂದರೆ ನಿಮ್ಮ ಪಾಡಿಗೆ ನೀವು ಬರೆಯುತ್ತಾ ಹೋಗಿ.

ಅಕ್ಷರಗಳನ್ನ ಅಲಂಕರಿಸುವುದರ ಬಗ್ಗೆ ನಿಮಗೇ ತಿಳಿದಿರುತ್ತೆ, ಅಲಂಕರಿಸಿದ ಪಠ್ಯವನ್ನ HTML ಹಾಗಿ ಉಳಿಸಿ ಕೊಳ್ಳಿ. HTML ಹಾಗೂ ಸಂಪೂರ್ಣ ಯೂನಿಕೋಡ್, ಈ ಎರ್ಡು ಗುಣಗಳ ಪ್ರಭಾವದಿಂದ ನಿಮ್ಮ ಕಡತವನ್ನ ಬೇರೆ ಯಾವುದೇ ಕಂಪ್ಯೂಟರ್ನಲ್ಲಿ FIREFOX ಅಥ್ವ INTERNET EXPLORERಅಥ್ವ google chroome ಮುಂತಾದ ಬ್ರೌಸರ್ ಗಳಲ್ಲಿ ಸುಲಭವಾಗಿ ತೆರೆಯ ಬಹುದು.
ಬರಹದಲ್ಲಿ ಬರೆದು ಉಳಿಸಿಕೊಂಡ BRH ಕಡತಗಳನ್ನ ತೆರೆದು, ಕನ್ನಡ ಯೂನಿಕೋಡ್ ಗೆ ತರ್ಜುಮೆ ಮಾಡಬಹುದು.
Table ಅಂದರೆ, ಹೇಗಿರುತ್ತೆ ನೀವೇ ನೋಡಿ

ಕುವೆಂಪು

ಡಿ ವಿ ಜಿ

ಗುರುವಾರ, ಡಿಸೆಂಬರ್ 10, 2009

ಭಾರೀ ಉದಾರವಾಗಿ ಬರೀ ಉದಾರೀಕರಣ

ಹಣಕಾಸಿನ ಬಗ್ಗೆ, ಒಂದಿಷ್ಟು ಈ ಹಿಂದೆ ಇಲ್ಲಿ ಬರ್ದಿದ್ದೆ. ನೀವು ಕೂಡ ಅದನ್ನ ಓದಿ ಮುಂದಿನ ಭಾಗ ಹಾಕಿ ಅಂತ ಅಂದಿದ್ದ್ರಿ. ಆದ್ರೆ, ಕೆಲವು ಒತ್ತಡಗಳ ಕಾರಣ ಏನನ್ನೂ ಬರೆಯದೇ ಏಕತಾನತೆ ಅನುಭವಿಸಿ, ಕೊನೆಗೆ ಉಸಿರು ಬಿಗಿದಂತಾಯ್ತು, ಅದಕ್ಕೆ ಒಂದಿಷ್ಟು ಬರೀಲೇ ಬೇಕು ಅಂತ ಕೂರ್ಬೇಕು ಅನ್ನಿಸ್ತು. ಆದ್ರೆ ಅದಕ್ಕಿಂತ ಮುಂಚೆ ಈ ಕೆಳಕಂಡ ಬರಹವನ್ನ ಓದಿ. ನಿಮಗೆ ಏನಾದ್ರೂ ಇನ್ನೂ ಹೆಚ್ಚು ಮಾಹಿತಿ ತಿಳಿದಿದ್ರೆ. ಹಂಚಿಕೊಳ್ಳೋದನ್ನ ಮರಿಬೇಡಿ.

~~~~ (*) ~~~~

ಈಗ ಮತ್ತೋಂದು ಸುಲಭ ಉದಾಹಾರಣೆಯನ್ನ ತಗೋಳ್ಳಾಣ. ಸುಮಾರು ೧೯೯೮ ರಲ್ಲಿ ರಷ್ಯದ ಅರ್ಥ ವ್ಯವಸ್ಥೆಯಲ್ಲಿ ಒಂದು ಬಾರೀ ಬಿರುಗಾಳಿಯೇ ಬೀಸಿತ್ತು. ಅದ್ರ ಪರಿಣಾಮವಾಗಿ ರಷ್ಯದಲ್ಲಿ ಎಲ್ಲಾ ಉತ್ಪನ್ನಗಳ ದರ ಇದ್ದಕ್ಕಿದ್ದಂತೆ ಗಗನಕ್ಕೇರಿದ್ವು, ಇದನ್ನ ನನ್ನ ಒಬ್ಬ ಸ್ನೇಹಿತ ತನ್ನ ಮಾತಲ್ಲಿ ಹೀಗೆ ಹೇಳಿದ್ದ ಅಂತ ಇಲ್ಲಿ ಬರ್ದಿದ್ದೀನಿ.

"ನಾನು ಆಗ ಹದಿನಾರು ವರ್ಷದವನಿದ್ದೆ. ನನಗೆ ಕಂಪ್ಯುಟರ್ ಕೊಡ್ಸಿ ಅಂತ ಮನೆಯಲ್ಲಿ ತುಂಬಾ ದಿನದಿಂದ ಹಟ ಮಾಡ್ತಿದ್ದೆ. ನನ್ನ ಹುಟ್ಟುಹಬ್ಬದ ಕೊಡುಗೆಯಾಗಿ ನನಗೆ ಕಂಪ್ಯುಟರ್ ಕೊಡ್ಸಿದ್ರು. ಅದಕ್ಕೆ ಆಗ ಸುಮಾರು ಎಳ್ನೂರು ಅಮೇರಿಕನ್ ಡಾಲರ್ ಬೆಲೆ ಇತ್ತು, ಅಪ್ಪ, ಅಮ್ಮ, ಚಿಕ್ಕಪ್ಪ ಎಲ್ಲ ಸೇರಿ ಕೊಡ್ಸಿದ್ರು. ಇದಾಗಿ ಒಂದೇ ತಿಂಗ್ಳಲ್ಲಿ ನಮ್ಮ ರಬೆಲ್ಸ್ (ರಷ್ಯಾದ ದುಡ್ಡಿನ ಹೆಸರು)
ಬೆಲೆ ನೆಲ ಕಚ್ತು. ಎಳ್ಣೂರು ಅಮೇರಿಕನ್ ಡಾಲರ್ ಕೊಟ್ಟು, ಒಂದು ತಿಂಗ್ಳ ಹಿಂದೆ ಖರೀದಿಸಿದ್ದ ನನ್ನ ಕಂಪ್ಯುಟರ ಬೆಲೆ ಒಂದು ತಿಂಗ್ಳ ಅಂತರದಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು. ಆ ದಿನ ನಾನು ಹಟ ಮಾಡ್ದೆ ಇದ್ದಿದ್ರೆ, ನನ್ನ ಕಂಪ್ಯುಟರ್ ತೊಗೊಳ್ಳೊಕ್ಕೆ ಮುಂದೆ ಇನ್ನೂ ಐದು ವರ್ಷನಾದ್ರೂ ಕಾಯ್ಬೇಕಿತ್ತು ಅನ್ಸುತ್ತೆ."

ಇದೊಂದು ಉದಾಹರಣೆಯಷ್ಟೇ. ಈಗ ನನ್ನ ಸ್ನೇಹಿತನ ಜಾಗ್ದಲ್ಲಿ ನೀವಿದ್ದಿದ್ರೆ? ಊಹಿಸಿಕೊಳ್ಳಿ ನಿಮಗೇನೇ ಎಲ್ಲಾ ಅರ್ಥ ಆಗುತ್ತೆ... http://en.wikipedia.org/wiki/1998_Russian_financial_crisis

ರಷ್ಯಾದ "ರಬೆಲ್ಸ್" ತರ ನಮ್ಮ "ರುಪಾಯಿ" ಮೌಲ್ಯನೂ ರಾತ್ರಿ ಕಳ್ದು ಬೆಳ್ಕಾಗೋದ್ರಲ್ಲಿ ಈ ರೀತಿ ಏನಾದ್ರೂ ಠುಸ್ಸೆಂದಿದ್ರೆ ನಮ್ಗೆ ಆಗ ಅದ್ರ (ದುಷ್)ಪರಿಣಾಮ ಏನು ಅಂತ ಸರ್ಯಾಗಿ ಮನವರ್ಕೆ ಆಗ್ತಿತ್ತು. ಅದು ಕ್ರಮೇಣವಾಗಿ ಹಂತ ಹಂತವಾಗಿ ಪಲ್ಟಿ ಹೋಡಿತಿರ‍ೋದ್ರಿಂದ ನಮ್ಗೆ ಅದಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗೋ ಗುಣನೂ ಬೆಳಿತಾ ಇದೆ ಅನ್ಸುತ್ತೆ. ಇಲ್ದೇ ಹೋಗಿದ್ರೆ ರುಪಾಯಿ ಮೌಲ್ಯವನ್ನ ಹೇಗೆ ಕಾಪಾಡ್ಕೋ ಬೇಕು ಅಂತ ಜ್ಞಾನನಾದ್ರೂ ಬೆಳೆಸ್ಕೋಳ್ತಿದ್ವಿ ಅಲ್ವ?.

ಹಣದುಬ್ಬರ ಅಂದ್ರೆ ಸಾಮಾನ್ಯ ಮನುಷ್ಯನಿಗೆ ಏನರ್ಥ? ಅಂತೇಳಿ ತಿಳಿಯಾಗಿ ತಿಳ್ದಿದೀವಿ. ಈಗ ಅದೇ ಜಾಗತಿಕ ಮಟ್ಟದಲ್ಲಿ ಇದರ ಅರ್ಥ ಏನು ಅಂತ ತಿಳ್ಕೋಳ್ಳೊಣ.

ಹಣದುಬ್ಬರ ಹೆಚ್ಚಾದ್ರೆ, ನಮ್ಮ ದೈನಂದಿನ ಅವಶ್ಯಕತೆಗಳಾದ ಅಕ್ಕಿ, ಬೇಳೆ, ಹಾಲು ಹೀಗೇ ಎಲ್ಲಾದರ ಬೆಲೆಯೂ ಗಗನೆಕ್ಕೇರಿ ಬಿಟ್ತಾವೆ. ಅದಕ್ಕೆ ತಕ್ಕಂತೆ ಇದ್ದಕ್ಕಿದ್ದಂತೆ ನಮ್ಮ ಆದಾಯವೇನೂ ಹೆಚ್ಚಾಗೋಲ್ಲ. ಆದ್ರೆ ಖರ್ಚು ಮಾತ್ರ ಬೆಳಿತಾನೇ ಇರ್ತದೆ. ಇಂತಹ ಪರಿಸ್ಥಿತಿ ಒಂದು ಮದ್ಯಮ ವರ್ಗದ ಕುಟುಂಬಕ್ಕೆ ಎದುರಾದ್ರೆ ಹೇಗಿರುತ್ತೆ ಅಂತ ಊಹೆ ಮಾಡ್ಕೋಬಹುದು. ಮಾಡ್ಕೋಂತೀರ ತಾನೆ?

ಇಂತಹ ಪರಿಸ್ಥಿತಿ ಒಂದು ದೇಶಕ್ಕೇನೆ ಎದುರಾದ್ರೆ ಹೇಗಿರುತ್ತೆ ಯೋಚ್ನೆ ಮಾಡಿ ಈಗ?
ಹೌದು, ನಾನು ಹಿಂದಿನ ಬರಹದಲ್ಲಿ ತಿಳ್ಸಿದಿನಲ್ಲ? ಇಂದಿರಮ್ಮನ ಹಸಿರು ಕ್ರಾಂತಿ ಬಗ್ಗೆ! ಅದರ ಹಿಂದಿನ ಕಥೆಯೇ ಹಾಗಿತ್ತು. ಸುಮ್ಮನೆ ಹಸಿರು ಕ್ರಾಂತಿಗೆ ಕೈ ಹಾಕಿದ್ದಲ್ಲ. ಜನ ಹೊಟ್ಟೆಗೆ ಹಿಟ್ಟು ಸಹ ಇಲ್ದೇ ಸಾಯ್ತಾ ಇದ್ದಂತ ಪರಿಸ್ಥಿತಿ ಇತ್ತು ಹಾಗ.

ಮೊದ್ಲೇ ನಮ್ಮನ್ನ ಕೊಳ್ಳೇ ಹೊಡ್ದಿದ್ದಾ ಬ್ರಿಟೀಷರ ಮುಷ್ಠಿಯಿಂದ ಆಗ್ತಾನೆ ಬಿಡಿಸಿ ಕೊಂಡು ಹೊರಗೆ ಬಂದಿದ್ದಾ, ಸ್ವಾತಂತ್ರ ಭಾರತಕ್ಕೆ, ಎದುರಾದ ಅತೀ ಗಂಭೀರ ಸಮಸ್ಯೆಗಳು ಅನೇಕ, ಅದ್ರಲ್ಲಿ ಅತೀ ಮುಖ್ಯವಾದವು ಅಂದ್ರೆ
 * ಪಾಕಿಸ್ಥಾನದ ಜೊತೆಗೆ ಪದೆ ಪದೆ ಗಡಿ ಸಮಸ್ಯೆಯ ಯುದ್ದ,
 * ಚೀನಾದ ಜೊತೆಗೆ ಯುದ್ದ,
 * ಇವೆರ್ಡು ಸಾಲ್ದಕ್ಕೆ ಬುಲೆಟ್ ವೇಗದಲ್ಲಿ ಬೆಳಿತಿದ್ದಾ ಜನಸಂಖ್ಯೆ,
 * ಜೊತೆಗೆ ನಮ್ಮ ಉನ್ನತ ರಾಜಕಾರಣಿಗಳ ಕೆಲ್ವು ತಪ್ಪು ತಪ್ಪು ನಿರ್ದಾರಗಳು
 * ಅನಕ್ಷರತೆ, ಬಡತನ, ನಿರುದ್ಯೋಗ,
ಹೀಗೇ ಎಲ್ಲಾ ಸೇರಿ ಸಮಾಜದ ಸಮತೋಲನವೇ ತಪ್ಪಿ ಹೋಗಿತ್ತು. ನಮ್ಮ ಅರ್ಥ ವ್ಯವಸ್ಥೆಯೇ ಕೊಚ್ಚಿ ಹೋಗಿತ್ತು.

ಇಂತಿಪ್ಪ ನಮ್ಮ ಕೇಂದ್ರ ಸರ್ಕಾರದಲ್ಲಿ ಕ್ರಮೇಣ ಬಾರೀ ಬೆಳ್ವಣಿಗೆಗಳು ಶುರುವಾದ್ವು. ಕೇವ್ಲ ಸರ್ಕಾರದಿಂದ ಎಲ್ಲ ಅಗತ್ಯಗಳನ್ನೂ ಪೂರೈಸೋದು ಕಷ್ಟ ಸಾದ್ಯ ಅಂತ ಮನವರಿಕೆ ಆಯ್ತು. ಹೀಗಾಗಿ ಕೆಲ್ವು ಉದ್ಯಿಮೆಗಳಲ್ಲಿ ಸಾಕಷ್ಟು ಸೇವೆಗಳನ್ನ ಉದಾರೀಕರಣದ ಗಾಳಿ ಬೀಸ್ತು.
 * ದೂರಸಂಪರ್ಕಸೇವೆಗಳಲ್ಲಿ ಉದಾರೀಕರಣ
 * ದೂರದರ್ಶನ ಸೇವೆಯಲ್ಲಿ ಸಾಧನೆ
 * ಬ್ಯಾಂಕ್ ಸೇವೆಗಳಲ್ಲಿ ಉದಾರೀಕರಣ
ಖಾಸಗಿಯವ್ರಿಗೂ ಸಾಮಾಜಿಕ ಜವಬ್ದಾರಿಗಳಲ್ಲಿ ಪಾಲ್ಗೋಳ್ಳೋ ಅವ್ಕಾಶ ಕೊಡೋ ವ್ಯವಸ್ಥೆಗೆ ಸಾಕಷ್ಟು ಪ್ರೋತ್ಸಾಹನೂ ಸಿಕ್ತು. ಇದೆಲ್ಲಾ ಹೆಚ್ಚಾಗಿ ನಡ್ದದ್ದು ಇಂದಿರಮ್ಮನ ಕಾಲ್ದಲ್ಲಿ.

ಇದೇ ದಿಶೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ೧೯೯೧ ರಲ್ಲಿ ನಮ್ಮ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ ನರಸಿಂಹರಾವ್ ಹಾಗೂ ಆಗ ಇವ್ರ ಸಂಪುಟದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಈಗಿನ ಪ್ರಧಾನಮಂತ್ರಿಗಳಾದ ಮನ ಮೋಹನ ಸಿಂಗ್ ಇವ್ರೆಲ್ಲಾ ಸೇರಿ ಮತ್ತೋಂದು ಹೊಸ ಹೆಜ್ಜೆ ಇಟ್ರು. ಏನಪ್ಪಾ ಅದು ಅಂದ್ರೆ, ನಮ್ಮ ದೇಶದ ಮಾರುಕಟ್ಟೆಯನ್ನ ಹೊರದೇಶದವ್ರಿಗೂ ಮುಕ್ತಗೊಳಿಸಿದ್ರು. ಅಂದ್ರೆ, ಇತರೇ ದೇಶದವ್ರು ಸಹ ನಮ್ಮಲ್ಲಿ ಹಣವನ್ನ ಹೂಡಿಕೆ ಮಾಡ್ಬೌದು ಅಂತೇಳಿ ಅವ್ಕಾಶ ಮಾಡಿ ಕೊಟ್ರು.

~~~(*)~~~

ಸಶೇಷ...

blogspot add widget