ಶನಿವಾರ, ಅಕ್ಟೋಬರ್ 16, 2010

ವಿಜಯದಶಮಿಯ ಹಾರ್ದಿಕ ಶುಭಾಶಯಗಳು


ಶ್ರೀಕೃಷ್ಣನಿಗೆ ಚಕ್ರವಿದ್ದಂತೆ,
ಅರ್ಜುನನಿಗೆ ಗಾಂಢೀವವಿದ್ದಂತೆ
ಕರ್ಣನಿಗೆ ವಿಜಯ ಧನಸ್ಸಿದ್ದಂತೆ

ಶರವೇಗದಲ್ಲಿ ಮುನ್ನುಗ್ಗುತ್ತಿರುವ ಐಟಿಲೋಕದಲ್ಲಿ
ಸಾಫ್ಟೇರ್‌ಎಂಬ ಈ ಕುರುಕ್ಷೇತ್ರ ಯುದ್ದದಲ್ಲಿ,
ನನಗೆ ಆಯುಧವಾಗಿರುವ
ಹೆಮ್ಮೆಯ ಓ ನನ್ನ ಲ್ಯಾಫ್‌ಟಾಪೇ,

ಅರ್ಜುನನ ಅಕ್ಷಯತೂಣಿರದಂತೆ,
ನಿನ್ನ ಬ್ಯಾಟರೀ ಸದಾ ಭರ್ತಿಯಾಗಿರಲಿ,
ಶ್ರೀಕೃಷ್ಣನ ಸಾರಥ್ಯವಿದ್ದಂತೆ,
ಇಂಟರ್ನೆಟ್ ಸದಾ ಜೊತೆಯಿರಲಿ.

ಕರ್ಣನಿಗೆ ಕವಚಕುಂಡಲಗಳ ರಕ್ಷಣೆ ಇದ್ದಂತೆ
ವೈರಸ್, ಮಾಲ್‌ವೇರ್, ಸ್ಪೈವೇರ್ಗಳಿಂದ
ನಿನಗೆ ೨೪/೭ ರಕ್ಷಣೆ ಇರಲಿ
.
ಅಶ್ವತ್ತಾಮನ ಹಣೆಯ ಮಣಿಯಂತೆ
ಅತ್ಯಾಧುನಿಕ ಸಾಫ್ಟೇರ್‌ಗಳು ಹಾಗೂ ಅವುಗಳ ಲೈಸೆನ್ಸ್ಗಳು
ಸದಾ ತುದಿಬೆರಳಿನಲ್ಲಿರಲಿ. 

ನಲ್ಮೆಯ ನನ್ನ ಎಲ್ಲಾ ಸನ್ ಮಿತ್ರರಿಗೂ
ಟೀಕಿಸುವ, ನಿಂದಿಸುವ ಹಾಗೂ ಶಪಿಸುವ
ಸಮ್ ಅದರ್‌ ಮಿತ್ರರಿಗೂ

ಸರ್ವರಿಗೂ
ಆಯುಧ ಪೂಜೆ ಹಾಗೂ
ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

/
ಲೋದ್ಯಾಶಿ

blogspot add widget