ಶುಕ್ರವಾರ, ಜುಲೈ 31, 2009

ವಿಜ್ಞಾನ ಮತ್ತು ಪ್ರಾಚೀನ ಭಾರತ



ಭೂಮಿ ಗೋಳಾಕಾರದಲ್ಲಿದೆ

ನಮಗೆ ಪುಸ್ತಕಗಳಲ್ಲಿ ತಿಳಿಸಿದ ಹಾಗೆ ಭೂಮಿ ಗೋಳಾಕಾರದಲ್ಲಿದೆ ಅಂತ ನಮಗೆ ಮೊದಲು ತಿಳಿಸಿಕೊಟ್ಟದ್ದು
ಕೋಪರ್ನಿಕಸ್ (1473 – 1543) ಮತ್ತೆ
ಗೆಲಿಲಿಯೋ (1564–1642).

ನಮ್ಮ ದೇಶದವರು ಏನು ಹೇಳಿದ್ದಾರೆ ಮತ್ತೆ ಯಾವಾಗ ಹೇಳಿದ್ದಾರೆ ಈಗ ನೋಡೋಣ
ಖಘೋಳಗ್ನ-ಗಣಿತಜ್ಞರಾದ ಆರ್ಯಭಟ (476–550 CE) ಹೇಳಿದ್ದು ,
"ಭೂಗೋಳ ಸರ್ವತೋ ವ್ರಿತ್ತಃ " - ( ಅರ್ಯಭತಿಯ, ಗೊಳಪದ, ಆರನೇ ಸ್ಲೋಕ)
ಈ ಸ್ಲೋಕದ ಅರ್ಥ ಏನು ಅಂದರೆ - "ಭೂಮಿ ಎಲ್ಲ ದಿಕ್ಕುಗಳಿಂದಲೂ ದುಂಡಗಿದೆ."

ಇನ್ನೊಬ್ಬ ಖಘೋಳಗ್ನ-ಗಣಿತಜ್ಞ-ಜ್ಯೋತಿಷಿಯಾದ ವರಾಹಮಿಹಿರ (505 – 587) ಹೇಳಿದ್ದು
"ಪಂಚ ಮಹಾಭೂತಮಯಸ್ತ್ರಾರಾಗನ್ನ ಪನ್ಜರೇ ಮಹ್ಲಗೂಲಃ" (ಪಂಚ ಸಿದ್ದಾಂತಿಕ, 13 ಚಾಪ್ಟರ್, ಸ್ಲೋಕ ಒಂದು )
ಈ ಸ್ಲೋಕದ ಅರ್ಥ ಏನು ಅಂದರೆ - "ಪಂಚಭೂತಗಳಿಂದ ಸೃಸ್ಟಿಯಾಗಿರುವ ಗೋಳಾಕಾರದ ಈ ಭೂಮಿಯು ಒಂದುಕಬ್ಬಿಣದ ಬಲೆಯಲ್ಲಿ ನೇತು ಹಾಕಿರುವ ಬಾಲ್ ನಂತೆ ಹೊಳೆಯುತ್ತಿರುವ ನಕ್ಸತ್ರ ಗಳ ಜೊತೆ ನೇತಾಡುತ್ತಿದೆ."

ಈಗ ರ್ರಿಗ್ವೇದದ ಒಂದು ಮಂತ್ರದತ್ತ ಗಮನ ಹರಿಸೋಣ
"ಚಕ್ರಾನ್ನಾಸಃ ಪರ್ಲ್ನ್ನಹಂ ಪ್ರ್ರಿತ್ಹಿವ್ಯಾ" (ರ್ರಿಗ್ವೇದ 1.33.8 ) ಅಂದರೆ
"ಯಾವ ಭೂಮಿಯ ಪರಿದಿಯ ಮೇಲೆ ಜನ ವಾಸಿಸಿದ್ದಾರೋ"

ಹೀಗೆಹೇ ವೇದದ ಇನ್ನು ಅನೇಕ ಪದ್ಯಗಳು ನಮ್ಮ ಭೂಮಿ ಗೋಳಾಕಾರದಲ್ಲಿ ಇದೆ ಎನ್ನುವುದನ್ನ ಸಾರುತ್ತವೆ.

ಹೀಗೆ ಮತ್ತೊಬ್ಬ ಖಘೋಳಗ್ನ-ಗಣಿತಜ್ಞ ಭಾಸ್ಕರಾಚಾರ್ಯ (1114 – 1185) ತಮ್ಮ ಪುಸ್ತಕ "ಲೀಲಾವತಿ" ಯಲ್ಲಿ ಹೇಳಿದ್ದು
"ನಿನ್ನ ಕಣ್ಣಿಗೆ ಕಾಣುವುದೆಲ್ಲಾ ಸತ್ಯ ಅಲ್ಲ. ಭೂಮಿಯು ಕಣ್ಣಿಗೆ ಕಾಣಿಸುವಂತೆ ಚಪ್ಪಟೆಯಾಗಿಲ್ಲ.
ಅದು ಒಂದು ಗೋಳಾಕಾರದಲ್ಲಿದೆ. ಒಂದು ದೊಡ್ಡದಾದ ವೃತ್ತ್ತವನ್ನು ಬರೆದು ಅದರ ನಾಲ್ಕನೇ ಒಂದು ಭಾಗದಷ್ಟುಪರಿದಿಯನ್ನು ನೋಡಿದರೆ ಅದು ಒಂದು ಸರಳ ರೇಖೆ ಹಾಗೆ ಕಾಣಿಸುತ್ತದೆ. ಆದರೆ ನಿಜಾರ್ಥದಲ್ಲಿ ಅದು ಒಂದು ವೃತ್ತ. ಅದೇರೀತಿ ಭೂಮಿಯೂ ಗೋಳಾಕಾರದಲ್ಲಿದೆ."

ಭೂಮಿಯು ಗೋಳಾಕಾರದಲ್ಲಿದೆ ಅನ್ನುವುದಕ್ಕೆ ಇನ್ನೊಂದು ಸಾಕ್ಷಿ ಗ್ರಹಣಗಳು, ಈಗ ಇದೇ ನಮ್ಮ ಖಘೋಳಗ್ನ-ಗಣಿತಜ್ಞಆರ್ಯಭಟ ಅವರು ಗ್ರಹಣದ ಬಗ್ಗೆ ಎಷ್ಟು ತಿಳಿದಿದ್ದರೂ ಅಂತ ನೋಡೋಣ...
"ಚಾದಯತಿ ಶಶಿ ಸೂರ್ಯಂ ಶಶಿನಂ ಮಹತಿ ಚ ಭೂಛಾಯಾ" ( ಆರ್ಯಭಾತ್ತಲ್ಯಂ, ಗೊಳಪದ, ಸ್ಲೋಕ ೩೭)
ಈ ಸ್ಲೋಕದ ಅರ್ಥ ಏನು ಅಂದರೆ "ಚಂದ್ರನು ಅಡ್ಡ ಬಂದಾಗ ಸೂರ್ಯಗ್ರಹಣವೂ ಮತ್ತು ಭೂಮಿಯು ಅಡ್ಡ ಬಂದಾಗಚಂದ್ರ ಗ್ರಹಣವು ಸಂಭವಿಸುವುದು. "

ಇಷ್ಟಲ್ಲದೇ ಇವರು ಗ್ರಹಣಗಳು ಎಷ್ಟು ದಿನಗಳಿಗೊಮ್ಮೆ ಸಂಭವಿಸುತ್ತವೆ ಅಂತಲೂ ಲೆಕ್ಕ ಹಾಕಿದ್ದರು ಮತ್ತು ಭೂಮಿಯುಸೂರ್ಯನ ಸುತ್ತ ಒಂದು ಭಾರಿ ಸುತ್ತುವುದಕ್ಕೆ 365 ದಿನಗಳು 12 ನಿಮಿಷಗಳು ಮತ್ತು 30 ಸೆಕೆಂಡುಗಳು ಬೇಕೆಂದು ಸಹತಿಳಿದಿದ್ದರು ಅಷ್ಟೇ ಅಲ್ಲ ಭೂಮಿಯು ತನ್ನ ಸುತ್ತ ತಾನು ತಿರುಗಲು 23 ಗಂಟೆಗಳು 56 ನಿಮಿಷಗಳು ಮತ್ತು 4.1 ಸೆಕೆಂಡ್ಗಳು ಬೇಕು ಅಂತಲೂ ತಿಳಿದಿದ್ದರು. (ದಿನ, ಗಂಟೆ, ನಿಮಿಷ ಮತ್ತು ಸೆಕೆಂಡ್ ಇವುಗಳನ್ನು ಇಷ್ಟೊಂದು ಕಡಾ-ಖಂಡಿತವಾಗಿಹೇಗೆ ತಿಳಿದಿದ್ದರು ಅನ್ನುವುದನ್ನ ಇನ್ನೊಮ್ಮೆ ವಿವರಣೆ ನೀಡುತ್ತೇನೆ ಈ ದಿನ ಇಷ್ಟು ಸಾಕು)

ಈಗ ನಮ್ಮ ಗುಂಡಗಿನ ಭೂಮಿಯ ಕೊನೆಯ ವಾಕ್ಯಕ್ಕೆ ಬರೋಣ...
"ಭೂಗೋಳ" ಪದದ ಅರ್ಥವೇ ಗೊಳಾಕಾರದ ಭೂಮಿ ಅಂತ ಆಗುತ್ತೆ. ಇದರ ಅರ್ಥ ಶತಮಾನಗಳ ಹಿಂದೆಯೇ ನಮ್ಮಪೂರ್ವಿಕರು ಭೂಮಿಯು ದುಂಡ(ಗೋಳಾಕಾರ)ಗಿದೆ ಎಂದು ತಿಳಿದಿದ್ದರು ಅಂತ ಅನ್ನಿಸುತ್ತೆ ಅಲ್ಲವೇ?

ಆದರು ನಾವು-ನೀವು ನಮ್ಮ ಪಠ್ಯ-ಪುಸ್ತಕದಲ್ಲಿ ಓದಿದ್ದು ಗೆಲಿಲಿಯೋ, ಕೊಪೆರ್ನಿಕಸ್ ಮತ್ತೆ ಕೆಪ್ಲರ್ ಅಂತ ಅಲ್ಲವೇ? ಯಾಕೆಈಗೆ?

ವಿ. ಸೂ:
ಓದುಗರಲ್ಲಿ ನನ್ನ ವಿನಂತಿ:
ನಾನು ಸಂಸ್ಕೃತದ ವಿದ್ಯಾರ್ಥಿಯೂ ಅಲ್ಲ, ಪಂಡಿತನಂತು ಮೊದಲೇ ಅಲ್ಲ.
ಆಗಾಗಿ ಇಲ್ಲಿ ಸಂಸ್ಕೃತದ ಕೊಲೆ ಆಪಾದನೆಯನ್ನ ನನ್ನ ತಲೆ ಮೇಲೆ ಹೇರದೆ ನನ್ನನ್ನು ಮನ್ನಿಸಿ.
ಸಾಧ್ಯವಾದಲ್ಲಿ ತಪ್ಪಿದ್ದಲ್ಲಿ ತಿದ್ದಿ ನಿಮ್ಮ ಅನಿಸಿಕೆ ಬರೆಯಿರಿ.


ಗುರುವಾರ, ಜುಲೈ 30, 2009

ನನ್ನೇ ನಾ ಮರೆತಂತೆ... P.U.C.. Please U C

ಇಲ್ಲಿಗೆ ಸುಮಾರು ಒಂದೂವರೆ ಅಥವಾ ಎರಡು ವರ್ಷದ ಹಿಂದೆ ಬಿಡುಗಡೆ ಆಗಿದ್ದ "ಪಿ.ಯೂ.ಸಿ" ಅನ್ನೋ ಹೆಸರಿನ ಕನ್ನಡಚಲನಚಿತ್ರದ ಬಗ್ಗೆ ಈಗ ನಾನು ವಿಮರ್ಶೆ ಬರೀತಾ ಇದ್ದೀನಿ ಅಂತ ತಪ್ಪು ತಿಳಿ ಬೇಡಿ. ಈ ಸಬ್- ಟೈಟಲ್ ಈ ಬರಹಕ್ಕೆ ಒಂತರಾಸರಿಯಾಗಿ ಒಪ್ಪಿಕೊಳ್ತಾ ಇರೋದರಿಂದ ಅದನ್ನ ಬಳಸಿಕೊಂಡೆ ಅಷ್ಟೇ.

ಉಳಿದಂತೆ ಬರಹದಲ್ಲಿ ಏನಾದರು ತಪ್ಪು ಕಾಗುಣಿತಅಥವಾ ತಪ್ಪು ವ್ಯಾಕರಣ ಕಂಡರೆ ಓದುಹುದನ್ನು ನಿಲ್ಲಿಸ ಬೇಡಿ. ಪೂರ್ತಿ ಓದಿ ಕೊನೆಗೆ ಕಾಮೆಂಟ್(ಅನಿಸಿಕೆ) ಬರಿಯೋದನ್ನಮರೆಯ ಬೇಡಿ.

ಈಗ ಬರಹ ಆರಂಬ... ಒಂದು 15 ನಿಮಿಷದಲ್ಲಿ ಓದಿ ಮುಗಿಸಿ ಬಿಡ ಬಹುದು. ಓದಿಕೊಳ್ಳಿ .

ಒಳ್ಳೆ ಹುಡುಗ , ಸ್ವಲ್ಪ ಜಾಣ , ಶಾಲೆಯಲ್ಲಿ, ಆಟ-ಪಾಠದಲ್ಲಿ ಚುರುಕು. ಸ್ವಲ್ಪ ಜುಗ್ಗ. ಅಕ್ಕ-ಪಕ್ಕದಲ್ಲಿ ಗೌರವ ಮತ್ತು ಪ್ರೀತಿ.

ಹೆಚ್ಚು ಹೆಚ್ಚು ಆಟ, ಅಲ್ಪ-ಸ್ವಲ್ಪ ಓದು. ಆದರೂ ತರಗತಿಯಲ್ಲಿ ಮೊದಲು ಅಥವಾ ಎರಡು ಅಥವಾ ಮೂರನೆ ಸ್ಥಾನ ಖಾಯಂ. ಒಮ್ಮೊಮ್ಮೆ ತೀರ ಹೆಚ್ಚು ಅನ್ನಿಸುವಸ್ಟು ಆತ್ಮ ವಿಸ್ವಾಸ ಕೆಲವೊಮ್ಮೆ ತೀರ ಪೆದ್ದು ಪೆದ್ದು ಆಗಿ ಆಡೋ ಅಹಂಕಾರ. ಮನೆಯಲ್ಲಿ ಅಹಂಕಾರ ಇನ್ನೂ ಜಾಸ್ತಿ.

ಇಬ್ಬರು ಅಕ್ಕಂದಿರು... ಆಗಂತ ತೀರ ವಿಶೇಷ ಪ್ರೀತಿ ಏನೂ ಇರ್ತಿರ್ಲಿಲ್ಲ. ಆದರೆ ಮನೆಯಲ್ಲಿ ಕೆಲಸಮಾಡ್ತಿರಲಿಲ್ಲ ಅಷ್ಟೇ.

ಮುಂದೆ. ಹೀಗೇ ಒಂದು ದಿನ 10 ಕ್ಲಾಸ್ ಪರೀಕ್ಸ್ಷೆ ಮುಗಿಯಿತು... ಫಲಿತಾಂಶ ಬಂದಾಗ ಮನೆಯಲ್ಲಿ ಒಂದು ವಿಶೇಷ ಮರ್ಯಾದೆಕೂಡ ದಕ್ಕಿತು. ಅದಕ್ಕೆ ಕಾರಣ ನನ್ನ ಮಾರ್ಕ್ಸ್-ಶೀಟ್ ಆಗಿತ್ತು.

ಯಸ್, ನನಿಗೆ ಕೂಡ ತಿಳಿಯದೆ ನನ್ನ ಜವಾಬ್ದಾರಿನಾ ಅದು ಇನ್ನುಹೆಚ್ಚು ಮಾಡಿತ್ತು... ಅದಕ್ಕೆ ಕಾರಣ ಇದಕ್ಕಿಂತ ಇನ್ನು ಹೆಚ್ಚು challenging ಆಗಿದ್ದ ದಿನಗಳು ತೀರ ದೂರ ಉಳಿದಿರಲಿಲ್ಲ.

ಪಿ.ಯೂ.ಸಿ ಅಂತ ಶಿವಮೊಗ್ಗ ದಲ್ಲಿ ಒಂದು ಕಾಲೇಜ್ಗೆ ಸೇರಿಸಿ ವೀರಶೈವ ಹಾಸ್ಟೆಲ್ ನಲ್ಲಿ ಎರಡು ವರುಷ ಇರುಹುದು ಅಂತ ಮನೆಯಲ್ಲಿತಿಳಿಸಿದರು. ಮೊದ-ಮೊದಲು ಹಾಸ್ಟೆಲ್ ಅನುಭವ ತುಂಬಾ ಖುಷಿ ಕೊಟ್ಟಿತು.

ಸ್ನೇಹಿತರ ಜೊತೆ ಆಟ-ಊಟ-ತಿಂಡೀ, ಪ್ರತಿಭಾನುವಾರ ಸಾ~ಕು ಅನ್ನಿಸುವಸ್ಟು ಕ್ರಿಕೆಟ್, ಮತ್ತೆ ಫಿಸಿಕ್ಸ್ ಟೊಶನ್. ಜೊತೆಗೆ ಆ ಯರ್ರಾ-ಬಿರ್ರಿ ಸ್ಟ್ರಿಕ್ಟ್ ಕಾಲೇಜ್. ಆದರೆ ಹಾಸ್ಟೆಲ್ ಜೀವನಲ್ಲಿ ನನಿಗೆ ಏನೋ ಒಂದು ಕಳೆದು ಹೋಗಿದೆ ಅಂತ ಅನ್ನಿಸಲಿಕ್ಕೆ ಶುರುವಾಯ್ತು.

ಅದು ಏನು ಅಂತ ಯಾರಹತ್ತಿರಾನೂ ಹೇಳೋ ಆಗೂ ಇರಲಿಲ್ಲ-ಕೇಳೂ ಆಗೂ ಇರಲಿಲ್ಲ. ಯಾಕಂದ್ರೆ ಜೊತೆಗೆ ಇದ್ದವರೆಲ್ಲಾ ನನ್ನ ವಯಸ್ಸಿನ ಗೆಳೆಯರುಜೀವನದಲ್ಲಿ ನನಗಿಂತ ಏನೂ ವಿಶೇಷ ಅನುಭವ ಇಲ್ಲದವರು ಅನ್ನುವ ಸ್ವಯಂ ನಿರ್ಧಾರ.

ಅವರ ಹತ್ತಿರ ಹೀಗೆ-ಹೀಗೆ ಅಂತ ನಾನು ನನ್ನ ಕಥೆನ ಹೇಳಿದರೆ ಎಲ್ಲಿ ಅವರು ನನ್ನನ್ನ ದೂರ ಮಾಡ್ತಾರೋ ಅನ್ನೋ ಭಾವನೆ . ಅಥವಾ ಸ್ವಲ್ಪ ಸ್ವಾಭಿಮಾನ ಕೂಡ ಇರಬಹುದು.ಆದರೂ ಒಂದು ಇಬ್ಬರ ಹತ್ತಿರ ನನ್ನ ಅನುಭವವನ್ನು ಹೇಳಿ ನೋಡಿದೆ.

ಆಗ ನನಗೆ ಅನ್ನಿಸಿದ್ದೇ ಅದು ಆಗಿದ್ದು .

ಆಗ ನನಿಗೆ ಪದೇ-ಪದೇ ಅನ್ನಿಸ್ತಾ ಇದ್ದಿದ್ದು ಏನಪ್ಪಾ ಅಂದ್ರೆ. ಸ್ನೇಹಿತರಿಂದ ಏನನ್ನೂ ಊಹಿಸ (ಬಯಸ) ಬಾರದು. ಅಂದರೆಮನೆಯಲ್ಲಿ ಅಪ್ಪ - ಅಮ್ಮ -ಅಕ್ಕ ಇವರಿಂದ ಸಿಗ್ತಾ ಇದ್ದ ಒಂದು excuse ಅಲ್ಲಿ ಸಿಕ್ತಾ ಇರಲಿಲ್ಲ.

ಎಷ್ಟು ಜನ ಸ್ನೇಹಿತರು ಜೊತೆಗೆಇದ್ದರೂ ಸಹ ಊರಲ್ಲಿ ಇದ್ದ ನನ್ನ ಮನೆ, ಅಪ್ಪ, ಅಮ್ಮ, ಹೊಲ, ತೋಟ, ನಾಯಿ ಹೀಗೆ ಪ್ರತಿಯೊಂದು ಕೂಡ watermark ತರಾಕಾಣಿಸ್ಕೊಳ್ತಾ ಇತ್ತು.

ಸೆಕೆಂಡ್ ಪಿ.ಯೂ.ಸಿ ಪ್ರಾರಂಬ ಆಯಿತು ನೋಡಿ, ಅದು ಮೊದಲ ಅರ್ಧ ಹೇಗೆ ಮುಗಿಯಿತು ಅಂತ ಕೂಡ ಇವತ್ತಿನ ವರಿಗೆ ನಾನು ಯೋಚಿಸಿಲ್ಲ. ಆದ್ರೆ ಎರಡನೇ ಪಿ.ಯೂ.ಸಿ ಅರ್ಧದಲ್ಲೇ ಸಾ~ಕ~ಪ್ಪಾ ಇದು ಅಂತ ಅನ್ನಿಸಲಿಲ್ಲವಾದರೂ, ಅದು ಒಂದು ರೀತಿ ಬಾಯಿ ಬಿಟ್ಟು ಹೇಳೋಕ್ಕೆ ಆಗದೆ ಇರುವಷ್ಟು ಬೋರ್ ಆಗಿತ್ತು ಅಂತ ನನಿಗೆ ಈಗ ಅನ್ನಿಸ್ತಾ ಇದೆ.

ಅದಕ್ಕೆ ಸ್ವಲ್ಪ ಕಾರಣಗಳೂ ಕೂಡ ಇವೆ.

ಮೊದಲ ವರ್ಷದ ಪಿ.ಯೂ.ಸಿ ಪರೀಕ್ಷೆ ಬರೆದು ಊರಿಗೆ ಬಂದಾಗ, ಸ್ವಲ್ಪ ಸಮಾಧಾನ ಕೂಡ ಇರಲಿಲ್ಲ. ಯಾಕಂದ್ರೆನಮ್ಮ ಎರಡನೇ ವರ್ಷದ ಪಿ.ಯೂ.ಸಿ ಕ್ಲಾಸೆಸ್ ಪ್ರಾರಂಬ ಆಗಲಿಕ್ಕೆ ಇದ್ದದ್ದು 15 ದಿನದ ವಿಶ್ರಾಂತಿ ಮಾತ್ರ .

ಸರಿ, 15 ದಿನ ರಜೆ ಮುಗಿಸಿ ಹಾಸ್ಟೆಲ್ ಗೆ ವಾಪಾಸ್ ಬಂದದ್ದಾಯಿತು. ಮತ್ತೆ ಮುಂದ್ಯಾ ? ಇನ್ನೆನು ? ಟೊಶನ್-ಕಾಲೇಜ್ - ಹಾಸ್ಟೆಲ್-ಟೊಶನ್-ಕಾಲೇಜ್. ಆದರೆ ಹಾಸ್ಟೆಲ್ನಲ್ಲಿ ಇನ್ನೂ ಮೆಸ್ (ಅಡಿಗೆ ಮನೆ) ಓಪನ್ ಆಗಿರಲಿಲ್ಲ. ಯಾಕಪ್ಪ ಅಂದರೆ ನಾವು ಎರಡನೇ ಪಿ.ಯೂ.ಸಿ ವಿಧ್ಯಾರ್ಥಿಗಳು ಮಾತ್ರ ಹಾಸ್ಟೆಲ್ ನಲ್ಲಿ ಇದ್ದದ್ದು.

ಉಳಿದವರಿಗೆ ಅಂದರೆ 1 ಪಿ.ಯೂ.ಸಿ ಅಥವಾ B.A , B.Sc ಮೊದಲಾದವರಿಗೆ ಕಾಲೇಜ್ ಓಪನ್ ಆಗಲಿಕ್ಕೆ ಇನ್ನೂ 1 ತಿಂಗಳು ಟೈಮ್ ಇತ್ತಲ್ಲ ಅದಿಕ್ಕೆ ಹಾಸ್ಟೆಲ್ಗೆ ಅವರು ಇನ್ನೂ ಯಾರೂಬಂದಿರಲಿಲ್ಲ.

ಆಗಾಗಿ ಹಾಸ್ಟೆಲ್ ಅಡಿಗೆ ಭಟ್ಟ ತನ್ನ ಕೆಲಸಕ್ಕೆ ರಜೆ ತಗೊಂಡು ಓಡಿ ಹೋಗಿದ್ದ. ಇದು ನಮ್ಮ ಜೀವನದ ಒಂದುಮಹತ್ವದ ಹೆಜ್ಜೆ ಆದ್ದರಿಂದ ಸಿಕ್ಕಾಪಟ್ಟೆ ಪ್ರೆಪರೆಶನ್ ಬೇಕಿತ್ತು ಅಂತ ನಾವು ಒಂದು-ಒಂದುವರೆ ತಿಂಗಳು ಮೊದಲೇ ಹಾಸ್ಟೆಲ್ಗೆಹಾಜರ್ ಆಗಿದ್ದೆವು.

ಕನ್ನಡ ಮತ್ತೆ ಇಂಗ್ಲಿಷ್ ಬಿಟ್ಟರೆ ಉಳಿದ ನಾಲ್ಕು (P.C.M & B) ವಿಷಯಕ್ಕೂ ನಾನು ಟೊಶನ್ ಹೋಗ್ತಿದ್ದೆ. ಇಲ್ಲಿ "ನಾನು " ಅನ್ನೋದಕಿಂತ "ನಾವು" ಅನ್ನೋದೇ ಹೆಚ್ಚು ಸೂಕ್ತ, ಅದು ಟೊಶನ್ ಅನ್ನೋದು ಹೇಗೆ ಆಗಿತ್ತು ಅಂದರೆ ಉಪ್ಪಿನಕಾಯಿಯನ್ನೇ ಊಟವೆಂದು ತಿಳಿದು ಕೊಂಡ ಆಗೆ ಇತ್ತು ಆ ಪರಿಸ್ತಿತಿ.

ಬೆಳಗ್ಗೆ 5 ಗಂಟೆಗೆ ಎದ್ದರೆ ಮುಗಿಯಿತು, ರಾತ್ರಿ 9 ರ ವರೆಗೆ ಸರಿಯಾಗಿ ಸ್ನಾನ-ತಿಂಡಿ-ಊಟಕ್ಕೂ ಸಮಯ ಸಿಕ್ತಾ ಇರಲಿಲ್ಲ. ಅದಕ್ಕೆ ಕಾರಣ ಟೊಶನ್ ಮತ್ತೆ ಕಾಲೇಜ್ ನಡುವೆ ಇರುತ್ತಿದ್ದ ಅತಿ ಸ್ವಲ್ಪ ಸಮಯ ಮತ್ತು ಅಷ್ಟು ಅಲ್ಪ ಸಮಯದಲ್ಲಿ ಸೈಕಲ್ ತುಳಿಯ ಬೇಕಿದ್ದದೂರ.

9 ರಿಂದ 5 ರ ವರಿಗೆ ಕಾಲೇಜ್ ಮತ್ತೆ ಬೆಳಗ್ಗೆ 5 ರಿಂದ 8-45 ರವರೆಗೆ ಟೊಶನ್ ಮತ್ತೆ ಸಂಜೆ 5-30 ರಿಂದ ರಾತ್ರಿ 8-30 ಅಥವಾ 9 ರವರಿಗೆ ಟೊಶನ್. ಯಪ್ಪಾ -ಯಪ್ಪಾ -ಯಪ್ಪಾ .

ಇನ್ನು ನಮ್ಮ ಊಟ-ಸ್ನಾನ-ತಿಂಡಿ-ನಿದ್ದೆ ಇದೆಲ್ಲ ಯಾವಾಗ? ಸರಿ, ಇದು ಯಾಕೋ ನನ್ನಿಂದ ಆಗೋಲ್ಲ ಅಂತ ಅನ್ನಿಸಿ ಬೆಳಗ್ಗೆ ಮತ್ತೆ ರಾತ್ರಿ ಹೋಗುತ್ತಿದ್ದ ಒಂದು-ಒಂದು ಟೊಶನ್ ಕ್ಲಾಸೆಸ್ ಗೆ ಸ್ವಲ್ಪದಿನ(6 ತಿಂಗಳು?) ಗುಡ್ ಬೈ ಹೇಳಿದೆ.

ಏನಪ್ಪಾ ಅಂದ್ರೆ, ಕಾಲೇಜ್ ನಲ್ಲಿ ಪಾಠ, ಟೊಶನ್ ನಲ್ಲಿ ಪಾಠ. ಸರಿ ಪಾಠಗಳನ್ನ ಕಾಲೇಜ್ ನಲ್ಲಿ ಒಂದು ಸಾರಿ, ಟೊಶನ್ ನಲ್ಲಿ ಒಂದುಸಾರಿ, ಮತ್ತೆ ನಮ್ಮ ಹಾಸ್ಟೆಲ್ ರೂಮಲ್ಲಿ ನಮಗೆ ನಾವೇ ಒಂದು ಸಾರಿ.

ಹೀಗೇ ಒಟ್ಟಿಗೆ 3 ಸಾರಿ ಕಲಿತ್ತದ್ದಾಯಿತು. ಇದು ಒಂದು ತರಾಹಗಲು ಅಥವಾ ರಾತ್ರಿ ಮಲಗಿದಾಗ ಏನಾದ್ರು ಕನಸು ಬಿದ್ದರೆ, ಕನಸಲ್ಲೂ ಸಹ ಇದೆ ಪಾಠಗಳು ರಿಪೀಟ್ ಆಗ್ತಿರಬೇಕು ಆಗೆ ನಮ್ಮನ್ನನಾವು ಪ್ರಿಪೇರ್ ಮಾಡಿಕೊಳ್ತಾ ಇದ್ದೆವು.

ಮೊದಲ ಆರು ತಿಂಗಳಲ್ಲಿ ಎಲ್ಲ ವಿಷಯಗಳನ್ನೂ ಮೂರು-ಮೂರು ಬಾರಿ ಓದಿದ್ದ್ದೂ ಆಯಿತು. ಮುಂದ್ಯಾ ? ಇದು ಬರಿ, ಮೊದಲರ್ದಅಷ್ಟೇ ರೀ. ಮತ್ತೆ ? ಪ~ರೀ~ಕ್ಷೆ ಗೆ ಇನ್ನೂ 6 ತಿಂಗಳು ಬಾಕಿ ಇತ್ತಲ್ಲ.

ಆಗ ಏನು ಮಾಡುಹುದು? ಟೊಶನ್ ಮುಗೀತು ಬಿಡಿ. ಆದ್ರೆಕಾಲೇಜ್ಗೆ ರಜೆ ಕೊಡುವ ಆಗಿಲ್ಲ. ಯಾಕಂದ್ರೆ ನಾವು ಓದಿರುವುದು ಎಲ್ಲ ಮರೆತು ಹೋಗಿ ಬಿಡುತ್ತೇವೆ ಅನ್ನೋ ಭಯ ಇಬ್ಬರಲ್ಲೂ ಇತ್ತು, ನಮಗೆ ಮತ್ತೆ ನಮ್ಮ ಕಾಲೇಜ್ ಮೇಷ್ಟ್ರಿಗೆ !!!

ಮತ್ತೆ ಈ ಉಳಿದ 6 ತಿಂಗಳು ಏನು ಮಾಡುಹುದು?  ಮತ್ತೆ ಒಂದು ಸಾರಿ ಪಾಠ ಹೇಳಿ ಕೊಡುಹುದು!!! ಯಾರು? ಇನ್ನು ಯಾರು? ಕಾಲೇಜ್ ನಲ್ಲಿ ನಮ್ಮ ಮೇಸ್ಟ್ರು . ಇಷ್ಟರ ಮಧ್ಯೆ 2-3 ಪೂರ್ವ ಪರೀಕ್ಷೆ ಸಿದ್ದತೆಗಳು .

ಸರಿ, ಇಷ್ಟೂ ಆದ ಮೇಲೂ ನಮ್ಮ ಸೆಕೆಂಡ್ ಪಿ.ಯೂ.ಸಿ ಪರೀಕ್ಷೆ ಬರಲೇ ಇಲ್ಲ ಇನ್ನು 1 ತಿಂಗಳು ಆದಮೇಲೆ ನಮ್ಮ ಪರೀಕ್ಷೆ. ಈ ನಡುವೆ ಹಾಸ್ಟೆಲ್ ನಲ್ಲಿ ಮೆಸ್ (ಅಡಿಗೆ ಮನೆ) ನಿಲ್ಲಿಸಿದರು. ಕಾರಣ? ಹಾಸ್ಟೆಲ್ ನಲ್ಲಿ ಕೇವಲ ನಾವು ಅಂದರೆ ಸೆಕೆಂಡ್ ಪಿ.ಯೂ.ಸಿ ಓದುತಿದ್ದವರು ಮಾತ್ರ ಇದ್ದೆವು.

ಉಳಿದವರು ಪರೀಕ್ಷೆ ಮುಗಿಸಿ ಮನೆಗೆ ಹೋಗಿಯಾಗಿತ್ತು. ಇನ್ನೂ ಹಾಸ್ಟೆಲ್ ನಲ್ಲಿ ಉಳಿದವರ ಸಂಖ್ಯೆತೀರ ಕಡಿಮೆ ಆಗಿದ್ದ ಕಾರಣ ಅಡಿಗೆ ಭಟ್ಟ ರಜೆ ಹಾಕಿ ಮತ್ತೆ ಊರಿಗೆ ಹೋಗಿದ್ದ.

ಅರ್ಥಾತ್ ಊಟಕ್ಕೆ ಮತ್ತೆ ಹೋಟೆಲ್ಗೆ ಹೋಗುಹುದು ಅಥವಾ ರೂಮಿನಲ್ಲಿಯೇ ಸ್ವಂತ ಅಡಿಗೆ ಮಾಡಿಕೊಳ್ಳುಹುದು.

ಈಗ ಹೇಳಿ, ಎರಡನೇ ಪಿ.ಯೂ.ಸಿ ಅರ್ಧದಲ್ಲೇ ಸಾಕು ಅನ್ನಿಸಿದ್ದರೆ ಅದಕ್ಕೆ ತಪ್ಪು ಯಾರದು? ಕಾಲೇಜ್? ಟೊಶನ್? ಅಪ್ಪ-ಅಮ್ಮ? ಪರೀಕ್ಷೆ ಅಥವಾ ಭವಿಷ್ಯದ ಬಗ್ಗೆ ಭಯನ?

ಹೋಗ್ಲಿ ಬಿಡಿ ಇಷ್ಟರ ಮೇಲೆ.

ನಮಿಗೆ ಸ್ವಲ್ಪ ವಿರಾಮಗಳು ಸಿಗೋದು ಜಾಸ್ತಿ ಆಯಿತು ನೋಡೀ...ಶಿವಮೊಗ್ಗದಲ್ಲಿ ಬಿಡುಗಡೆ ಆದ ಎಲ್ಲಸಿನಿಮಾ ಗಳಿಗೂ ಹೋಗಿ-ಬರುವ ರೂಡಿ ಬೆಳಸಿ ಕೊಂಡೆವು. ಸಿನಿಮಾ ಬೋರ್ ಆದರೆ? ಆದರೆ ಇನ್ನೇನು, ಅರ್ಧದಲ್ಲೇ ಎದ್ದು ಬಂದುಹಾಸ್ಟೆಲ್ ರೂಮಲ್ಲಿ ಮತ್ತೆ ಸ್ವಲ್ಪ ಒತ್ತು ಟೈಮ್-ಪಾಸ್ ಮಾಡುಹುದು.

ಆದರೂ ಜೀವಶಾಸ್ತ್ರ ದ ಬಗ್ಗೆ ನನ್ನ ಅನುಭವ ಹೇಳಲೇ ಬೇಕು. ಏನಪ್ಪಾ ಅದು ಅಂದರೆ,  ಪ್ರತಿ ಸಾರಿ ಓದಿದ ಪಾಠ ಮತ್ತೆಓದುವಾಗ ಏನೋ ಒಂದು ಹೊಸ ಪಾಠ ಓದಿದ ಅನುಭವ. ಆ ಪಾಠಗಳನ್ನು ಎಷ್ಟು ಓದಿದರು ಇನ್ನು ಒಂದು ಸಾರಿ ಓದುವಾಗಮತ್ತೇನೋ ಹೊಸ ವಿಷಯ ತಲೆಗೆ ಬರುತ್ತಿತ್ತು.

ಆಗಂತ ಉಳಿದ ವಿಷಯಗಳಲ್ಲಿ ಆಸಕ್ತಿ ಇರಲಿಲ್ಲ ಅಥವಾ ಆಸಕ್ತಿ ಕಡಿಮೆ ಆಗಿತ್ತುಅಂತ ಅರ್ಥ ಅಲ್ಲ. ಆದರೆ ಏನಪ್ಪಾ ಅಂದ್ರೆ. ಪರೀಕ್ಷೆ ಇನ್ನು ಬೇಗ ಬಂದಿದ್ದರೆ ಇನ್ನೂ ಚೆನ್ನಾಗಿ ಇರುತಿತ್ತು ಅನ್ನಿಸ್ತಾ ಇತ್ತು. ಅಷ್ಟೇ.

ಪಿ.ಯೂ.ಸಿ ವಾರ್ಷಿಕ ಪರೀಕ್ಷೆ ಗೆ ನಡೆಸಿದ ತಯಾರಿ ಒಂದು ರೀತೀಲಿ ಸಿ, ಇ, ಟಿ ಪರೀಕ್ಷೆಗೆ ತುಂಬಾ ಅನುಕೂಲ ಮಾಡಿತು. ಏಕೆ ಅಂದರೆನಾನು ಸಿ, ಇ, ಟಿ ಪರೀಕ್ಷೆಗೆ ತಯಾರಿ ನಡೆಸಿದ್ದು ಅಷ್ಟಕ್ಕೆ ಅಷ್ಟೇ.

ಅಂತು ಸಿ, ಇ, ಟಿ  ಯಲ್ಲಿ, ನಾನು ಮತ್ತೆ ಅದೇ ಶಿವಮೊಗ್ಗ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಫ್ರೀ ಸೀಟ್ ಸಿಗುಹುದಕ್ಕೆ ಸಾಕಾಗುವಷ್ಟು ಮಾರ್ಕ್ಸ್ ಬಂದಿತ್ತು. ನಾನು ಸೇರಿಕೊಂಡೆ. ಇಲ್ಲಿಗೆ ನನ್ನ ಪಿ.ಯೂ.ಸಿ ಮುಗಿಯಿತು. ಮುಂದ್ಯಾ ? ಇನ್ನೊಮ್ಮೆ ಸಿಗೋಣ.

ಹೋಗಿ ಬನ್ನಿ .ಶರಣು.

blogspot add widget