ಮಂಗಳವಾರ, ಜನವರಿ 26, 2010

ಗಣರಾಜ್ಯ ದಿನಾಚರಣೆಯ ಶುಭಾಶಯಗಳು

ನಮ್ಮೆಲ್ಲರಿಗೆ ತಿಳಿದಿರುವಂತೆ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷ್ ಆಡಳಿತ ವ್ಯವಸ್ಥೆಯಿಂದ ಮುಕ್ತವಾಗಿ ಭಾರತ ಒಂದು ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. ಸ್ವತಂತ್ರ ದೇಶ ಅಂತ ನಾಮಪಟ್ಟಿ ಸಿಕ್ಕರೂ ಸಹ, ತನ್ನದೇ ಆದ ಆಡಳಿತ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿದ್ದ ಇನ್ನೂ ಅನೇಕ ಅಂಶಗಳು ನಮ್ಮಲ್ಲಿ ಇನ್ನೂ ಸಿದ್ದವಾಗಿರಲಿಲ್ಲ. ೧೯೩೫ ರಲ್ಲಿ ರಚಿಸಿಕೊಂಡಿದ್ದ ಕೆಲವು ಆಡಳಿತ ಸೂತ್ರಗಳನ್ನೇ ಅಲ್ಪ ಸ್ವಲ್ಪ ತಿದ್ದು ಪಡಿ ಮಾಡಿ ಕೊಂಡು ದೇಶವನ್ನ ಮುನ್ನಡೆಸಲಾಯಿತು.


ಸ್ವತಂತ್ರ ಹೋರಾಟದ ಹಾದಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ವಹಿಸಿದ ಪಾತ್ರ ಪ್ರಮುಖವಾದದ್ದು. ಬ್ರಿಟೀಷರು ಭಾರತ ಬಿಟ್ಟು ತೊಲಗುವಂತೆ ಮಾಡಲು ಅನೇಕ ಚಳವಳಿಗಳು, ಸತ್ಯಾಗ್ರಹಗಳು ಮುಂತಾದ ಸ್ವರೂಪಗಳಲ್ಲಿ ಹೋರಾಟವನ್ನ ನಡೆಸಲಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಸ್ವತಂತ್ರ ಪೂರ್ವದ ಹೋರಾಟದ ದಿನಗಳಲ್ಲಿಯೇ ದಿನಾಂಕ ಜನವರಿ ೨೬, ಪ್ರತೀ ವರ್ಷವೂ ಭಾರತ ಸ್ವತಂತ್ರ ದಿನಾಚರಣೆ ಎಂದು ಆಚರಿಸುತ್ತಾ ಬರುತ್ತಿತ್ತು.



ಚಿತ್ರ ಕೃಪೆ: ಇಲ್ಲಿಂದ

ಭಾರತ ಸ್ವತಂತ್ರವಾದ ನಂತರ 
ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ಮೊದಲ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಡಿಸೆಂಬರ್ ೯ ೧೯೪೭ ರಿಂದ ನವೆಂಬರ್ ೨೬ ೧೯೪೯ ರ ಅವಧಿಯಲ್ಲಿ ನಮ್ಮ ಸಂವಿಧಾನವು ರಚಿನೆಗೊಂಡಿತು, ಅಂಬೇಡ್ಕರ್ ರವರು ಸಂಸತ್ತಿನಲ್ಲಿ ಮಂಡಿಸಿದ ನಂತರದ ದಿನಗಳಲ್ಲಿ ಕೆಲವೇ ಕೆಲವು ತಿದ್ದು ಪಡಿಗಳೊಂದಿಗೆ ಸಂವಿಧಾನವು ಭಾರತ ಸರ್ಕಾರದಿಂದ ಅಂಗೀಕೃತವಾಯಿತು. ೧೯೫೦ ಜನವರಿ ೨೬ ರಿಂದ ಅಧಿಕೃತವಾಗಿ ಜಾರಿಗೆ ತರಲಾಯಿತು. ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರ್ ರವರು "ಭಾರತ ಸಂವಿಧಾನ ಶಿಲ್ಪಿ" ಎಂದು ಕರೆಸಿಕೊಂಡರು. ಇವರ ಇತರ ಸಾಧನೆಗಳೆಂದರೆ ಸಮಾಜಿಕ ಸಮಾನತೆಯ ಬಗ್ಗೆ ಕಾಳಜಿ ಹಾಗೂ ಅಸ್ಪೃಶ್ಯತೆ, ಜಾತಿ ಪದ್ದತಿ ವಿರುದ್ದ ಹೋರಾಟ. ೧೯೫೬ ಡಿಸೆಂಬರ್ ೬ ರಂದು ಇವರು ಮರಣ ಹೊಂದಿದರು. ಇವರಿಗೆ ೧೯೯೦ ರಲ್ಲಿ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲಾಯಿತು.


ಭಾರತದ ವಿಲೀನ & ಪ್ರಜಾಪ್ರಭುತ್ವ
ಅನೇಕ ಭಾಷೆಗಳು, ಸಂಸ್ಕೃತಿಗಳು, ರಾಜರುಗಳು (೫೬೫ ಸಂಸ್ಥಾನಿಕ ರಾಜರುಗಳು), ಧಾರ್ಮಿಕ ಆಚರಣೆಗಳು ಹೀಗೇ ಇನ್ನೂ ಅನೇಕ ಅಂಶಗಳಿಗೆ ತುತ್ತಾಗಿ ಹರಿದು ಹಂಚಿಹೋಗಿದ್ದ ದೇಶವನ್ನ ಒಗ್ಗೂಡಿಸುವ ದಿಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಸರ್ದಾರ್ ವಲ್ಲಭಭಾಯ್ ಪಟೇಲ್ ರವರು. ಇದೇ ಸಾಧನೆಗಾಗಿಯೇ ಇವರನ್ನ ಭಾರತದ "ಉಕ್ಕಿನ ಮನುಷ್ಯ" ಎಂದು ಗುರುತಿಸಲಾಯಿತು. ಅಲ್ಲದೆ ಇವರನ್ನ ಭಾರತದ ಬಿಸ್ಮಾರ್ಕ್ ಅಂತಕೂಡ ಗುರುತಿಸಲಾಗಿದೆ. ( ಒಟ್ಟೋವನ್ ಬಿಸ್ಮಾರ್ಕ್ ಜರ್ಮನಿಯ ಏಕೀಕರಣದಲ್ಲಿ ಪ್ರಮುಖ ಮಾತ್ರವಹಿಸಿದವರು ಎಂದುಬು ನಿಮ್ಮೆಲರಿಗೆ ತಿಳಿದಿದೆ ಅಂದು ಭಾವಿಸುತ್ತೇನೆ.) ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಮಂತ್ರಿಗಳಾಗುವ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿ ಹೋದರೂ ಉಪಪ್ರಧಾನಿಗಳಾಗಿ, ಸ್ವತಂತ್ರ ಭಾರತದ ಮೊಟ್ಟ ಮೊದಲ ಗೃಹ ಸಚಿವರಾಗಿ ಕಾರ್ಯ ನಿರ್ವಹಿದ ಇವರು ಡಿಸೆಂಬರ್ ೧೫ ೧೯೫೦ ರಂದು ಮರಣ ಹೊಂದಿದರು. ಇವರಿಗೆ ೧೯೯೧ ರಲ್ಲಿ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲಾಯಿತು.


ಭಾರತ ಸಂವಿಧಾನದ ಪೀಠಿಕೆ: (ಮಾಹಿತಿ : ವಿಕೀಪೀಡಿಯ )
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ;
  • ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
  • ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
  • ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ,
ವಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ ನವೆಂಬರ್ ಮಾಹೆಯ ೨೬ನೇ ದಿನದಂದು ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.


ಭಾರತ ಸರ್ಕಾರದಲ್ಲಿ ಸಂವಿಧಾನವನ್ನ ಅಧಿಕೃತವಾಗಿ ಜಾರಿಗೊಳಿಸಿದ ಹಾಗೂ ಅನೇಕ ಅಂಶಗಳಿಗೆ ತುತ್ತಾಗಿ ಚದುರಿ ಹೋಗಿದ್ದ ತುಂಡು ತುಂಡು ಸಂಸ್ಥಾನಗಳನ್ನ ಒಗ್ಗೂಡಿಸಿ ವಿವಿದ ರಾಜ್ಯಗಳಾಗಿ ವಿಂಗಡಿಸಿ ಅಧಿಕಾರ ವಿಕೇಂದ್ರೀಕರಣದ ಸಾಧನೆಯ ಯಶಸ್ಸಿನ ನೆನೆಪಿಗಾಗಿ ನಾವು ಪ್ರತೀ ವರ್ಷ ಜನವರಿ ೨೬ ರಂದು ಗಣರಾಜ್ಯ ದಿನಾಚರಣೆ ಯನ್ನ ಆಚರಿಸುತ್ತಾ ಬರುತ್ತಿದ್ದೇವೆ,
----------
ಪ್ರತೀ ವರ್ಷದ ಜನವರಿ ೨೬ ರಂದು ಗಣರಾಜ್ಯ ದಿನಾಚರಣೆಯನ್ನ ಆಚರಿಸುವುದರ ಹಿನ್ನೆಲೆಯನ್ನ ಕೆಲವೇ ಕೆಲವು ಪ್ರಮುಖ ಅಂಶಗಳಲ್ಲಿ ಹೇಳಿ ಮುಗಿಸಲು ಪ್ರಯತ್ನಿಸಿದ್ದೇನೆ. ನಿಮಗೆ ಮೇಲಿನ ವಿವರಣೆಯನ್ನ ಗ್ರಹಿಸಲು ಸಾದ್ಯವಾದಲ್ಲಿ ಧನ್ಯವಾದಗಳು, ಇಲ್ಲವಾದಲ್ಲಿ ಏನೂ ಅಪಾಯವಿಲ್ಲ. 
ಎಂದಿನಂತೆ ತಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. 


ಗುರುವಾರ, ಜನವರಿ 21, 2010

ಚೆಲ್ಲಾಪಿಲ್ಲಿ ಆಟಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ

ಆಟದ ನಿಯಮಗಳು
೧. ಆಟವನ್ನ ಸಂಪೂರ್ಣವಾಗಿ ಕೇವಲ ನಿಮ್ಮ ಗಣಕದ ಇಲಿಯನ್ನ (computer mouse) ಬಳಸಿ ಆಡಬಹುದು,
೨. ಅಕ್ಷರಗಳನ್ನ ಎಳೆದು-ತನ್ನಿ, ಸೂಕ್ತ ಕೋಣೆಯಲ್ಲಿ ಹಾಕಿ (drag and drop).
೩. ಪ್ರತೀ ಬಾರಿ ಮೂರು ಪದಗಳನ್ನ ಚೆಲ್ಲಾಪಿಲ್ಲಿ ಮಾಡಲಾಗಿರುತ್ತದೆ.
೪. ಪದಗಳನ್ನ ಗುರ್ತಿಸಿ, ಸರ್ಯಾಗಿ ಜೋಡಿಸಿದರೆ ಮೂರು ಅಂಕ ನಿಮಗೆ ಬರುತ್ತೆ.
೫. ಪದಗಳನ್ನ ಗುರುತಿಸಲು ಕೆಲವು ಅಕ್ಷರಗಳನ್ನ ಈಗಾಗಲೇ ಸರ್ಯಾದ ಕೋಣೆಯಲ್ಲಿ ತೋರಿಸಿರುತ್ತೆ.
೬. ಉಳಿದ ಅಕ್ಷರಗಳನ್ನ ಅವುಗಳ ಸ್ಥಾನಕ್ಕೆ ಎಳೆದು ತಂದು ಹಾಕಿ,
೭. ಮೂರೂ ಪದಗಳನ್ನ ಸರ್ಯಾಗಿ ಗುರ್ತಿಸಿದರೇ, ಆಟವನ್ನ ನೀವು ಗೆದ್ದಂತೆ.
೮. ಆಟದ ಮದ್ಯೆದಲ್ಲಿ ಯಾವಾಗ ಬೇಕಾದರೂ ಅಕ್ಷರಗಳನ್ನ ಕೋಣೆಯಿಂದ ಕೋಣೆಗೆ ಬದಲಿಸಿ ಬಹುದು.
೯. ಒಮ್ಮೆ ಒಂದು ಕೋಣೆಯಲ್ಲಿ ಒಂದು ಅಕ್ಷರವನ್ನ ಕೂರಿಸದ ಮೇಲೆ, ಮತ್ತೆ ಅದ್ರಲ್ಲಿ ಇನ್ನೋಂದು ಅಕ್ಷರವನ್ನ ಕೂರಿಸಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಮೊದಲಿಗೆ ಇದ್ದ ಅಕ್ಷರವನ್ನ ಎತ್ತಿ, ಮೇಲಿನ ದೊಡ್ದ ಕೋಣೆಗೆ ಸ್ಥಳಾಂತರಿಸಿ ಕೊಳ್ಳಿ.


೧೦. ಪದಗಳನ್ನ ಜೋಡಿಸಲು ಅಸಾದ್ಯವೆನಿಸಿದರೆ, Show ಎಂಬ ಗುಂಡಿ ಒತ್ತಿದರೆ ಆಟವು ತಾನಾಗೆ ಮುಗಿಯುತ್ತೆ, ಆದರೆ ಅಂಕ ಸಿಗುವುದಿಲ್ಲ.
೧೧. ಸಾವಿರಾರು ಪದಗಳ ಪರಿಚಯ ಮಾಡಿಕೊಳ್ಳಿ, ಬನ್ನಿ, ಚೆಲ್ಲಾಪಿಲ್ಲಿ ಆಟಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ. 

ಸೋಮವಾರ, ಜನವರಿ 18, 2010

ಚಿರಶಾಂತಿ ಸಿಗಲಿ.

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಅತ್ಯಂತ ಶಿಸ್ತಿನ ಕಲಾವಿದರಗಿದ್ದ ಡಾ. ಕೆ. ಎಸ್.ಅಶ್ವಥ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ದೇಹಕ್ಕೆ ಸಾವುಂಟು ಆತ್ಮಕ್ಕೆ ಸಾವಿಲ್ಲ .




ಚಿತ್ರ : http://www.viggy.com/interview/images/ashwath_main.jpg

ಬುಧವಾರ, ಜನವರಿ 13, 2010

ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ


ನಾನು ಬರೆದಿರುವ ಈ ಲೇಖನವು ವಿವಿಧ ಮಾರ್ಪಾಡುಗಳನ್ನ ಪಡೆದುಕೊಂಡು ಅನ್ಯರ ಉದ್ದೇಶಕ್ಕೆ ಸಿಕ್ಕಿ ಭಿನ್ನ ಅರ್ಥದೊಂದಿಗೆ ಅಂತರ್ಜಾಲದಲ್ಲಿ ತೇಲುತ್ತಿರುವ ವರದಿಗಳು ಬಂದಿವೆ.

ಅದರ ಬಗ್ಗೆ ನಾನು ಜವಾಬ್ದಾರನಲ್ಲ


ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ



ಭಾರತೀಯ ಭಾಷೆಗಳನ್ನ ಗಣಕೀಕರಿಸಲು ಕೆಲಸಗಳು ಆರಂಬವಾಗಿ ಸುಮಾರು ೨೭ ವರ್ಷಗಳೇ ತುಂಬಿವೆ.
* ಗಣಕದಲ್ಲಿ ಸಂಶೋದನೆಗಳು ಆರಂಬವಾದ ದಿನಗಳಿಂದಲೇ,
* ಗಣಕಗಳೆಂದರೇನು? ಎಂದು, ಜನ ಸಾಮಾನ್ಯರಿಗೆ ಇನ್ನೂ ಸರಿಯಾಗಿ ತಿಳಿಯುವ ಮೊದಲೇ,
* ಮಾಜಿ ಪ್ರದಾನಮಂತ್ರಿಗಳಾದ ಮಾನ್ಯ ಪಿ.ವಿ.ನರಸಿಂಹ ರಾವ್ ಅವರು ನಮ್ಮ ದೇಶವನ್ನ ಜಾಗತಿಕವಾಗಿ ಮುಕ್ತ ಮಾರುಕಟ್ಟೆಯಾಗಿ ಪರಿವರ್ತಿಸುವ ಮೊದಲೇ
* ವಿದೇಶಿಯರು ಬಂದು ಬಂಡವಾಳ ಹೂಡುವ ಮೊದಲೇ
* ಸರ್ಕಾರ ಬಂದು ಬಂಡವಾಳ ಹಾಕುವ ಮೊದಲೇ
೧೯೮೩ ರಿಂದಲೇ ಭಾರತೀಯ ಭಾಷೆಗಳನ್ನ ಗಣಕೀಕರಿಸುವ ಉದ್ದೇಶವಾಗಿ ವಿವಿದ ಕಂಪನಿಗಳಲ್ಲಿ ಪ್ರಜ್ಞಾವಂತ ತಂತ್ರಜ್ಞರು ಸಂಶೋದನೆಗಳನ್ನ ನಡೆಸಿದ್ದಾರೆ.
ಈ ಸಂಶೋಧನೆಯ ಫಲವಾಗಿ ಅನೇಕ ತಂತ್ರಾಂಶಗಳನ್ನ ಯಶಸ್ವಿಯಾಗಿ ಸಿದ್ದ ಪಡಿಸಲಾಗಿತ್ತು/ದೆ.

೧೯೯೩ ರಿಂದ ೨೦೦೩ ರ ಅವಧಿಯಲ್ಲಿಯೇ ಅನೇಕ ಅನ್ವಯಿಕ ತಂತ್ರಾಂಶಗಳು (Application softwares) ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲು ಸಾದ್ಯವಾಗಿತ್ತು. ಅತೀ ಪ್ರಮುಖ ಮೂರು ಕಂಪನಿಗಳನ್ನ ಇಲ್ಲಿ ತಿಳಿಸಸ್ತೀನಿ. ಇವಿಷ್ಟೇ ಅಂತ ತಿಳಿ ಬೇಡಿ. ಇನ್ನೂ ಅನೇಕರಿದ್ದಾರೆ,

ಕಂಪನಿ ಹೆಸರು
ಮುಖ್ಯಸ್ತರು
ಇಸವಿ
1
SRG Softwares Pvt.Ltd.
ಮುತ್ತುಕೃಷ್ನನ್
೧೯೮೪

CyberSpace MultiMedia Ltd,
ಆಕೃತಿ ಆನಂದ್
೧೯೮೩

AppleSoft
ಅನಬರಸನ್
-

ಈಗ ಈ ಕಂಪನಿಗಳಿಂದ ಹೊರ ಬಂದ ಕೆಲವು ಪ್ರಮುಖ ತಂತ್ರಾಂಶಗಳನ್ನ ಗಮನಿಸೋಣ.
ಈ ಕೆಳಕಂಡ ತಂತ್ರಾಂಶಗಳ ಪಟ್ಟಿಗಳ ಮೇಲೆ ಕಣ್ಣಾಯಿಸಿ. ಇವುಗಳೆಲ್ಲಾ ಭಾರತೀಯ ಭಾಷೆಗಳಿಗಾಗಿ/ಭಾರತೀಯ ಭಾಷೆಗಳಿಗೋಸ್ಕರ ಹಾಗೂ ಭಾರತೀಯರಿಂದಲೇ ಸಿದ್ದವಾದಂತದ್ದು ಅನ್ನೋದು ವಿಶೇಷವಾಗಿ ಗಮನಿಸ ಬೇಕಾದ ಅಂಶ.
ಮೊದಲಿಗೆ SRG Softwares Pvt Ltd.

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ

ಶಬ್ಧರತ್ನ
ಕನ್ನಡದ ಪ್ರಪ್ರಥಮ ಪದ ಸಂಸ್ಕರಣ ತಂತ್ರಾಂಶ
೧೯೮೭

ವೀನಸ್
ಕನ್ನಡ ಡಿ.ಟಿ.ಪಿ ತಂತ್ರಾಂಶ
೧೯೮೯

ಚಿತ್ರಕಲ
ಕನ್ನಡದ ದೂರ ದರ್ಶನ ಕೇಂದ್ರ ದಲ್ಲಿ ಬಳಸಲು
೧೯೯೦

ಐನೆಕ್ಸ್
ದತ್ತಾಂಶ ತಂತ್ರಾಂಶ
೧೯೯೩

ವಿಂಕಿ
ವಿಂಡೋಸ್ ನ ಇತರೆ ಅನ್ವಯಿಕ ತಂತ್ರಾಮ್ಶಗಳಲ್ಲಿ ಬರೆಯಲು
೧೯೯೪

ಕಾರ್ಯಲಯ
MS Office ಇದ್ದ ಹಾಗೆ, ಸಂಪೂರ್ಣ ಭಾರತೀಯ ಭಾಷೆಗೋಸ್ಕರ
೧೯೯೯

ಬ್ಯಾಂಕ್ ಸ್ಕ್ರಿಪ್ಟ್
ದತ್ತಾಂಶ ಸಂಸ್ಕರಣ ತಂತ್ರಾಂಶ
೨೦೦೧

SRG ಬ್ರೌಸರ್
ಅಂತರ್ಜಾಲ ಮತ್ತೆ ಆಂತರಿಕ ಜಾಲ ಬ್ರೌಸರ್ similar IE, Firefox, etc
೨೦೦೩


ಈಗ CyberSpace Multimedia Ltd.

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ
ಆಕೃತಿ ವೆಬ್ ಟೆಕ್ನಾಲಜಿ
www.indianlanguages.com.
ಭಾರತೀಯ ಭಾಷೆಗಳ ಮೊದಲ ಅಂತರ್ಜಾಲ ತಾಣ ಸಿದ್ದಗೊಳಿಸಿದ್ದು
www.vishwakannada.com
ಕನ್ನಡಸ ಮೊದಲ ಅಂತರ್ಜಾಲ ಪತ್ರಿಕೆ ವಿಶ್ವ ಕನ್ನಡ ಸಿದ್ದಗೊಳಿಸಿದ್ದು.
www.krantidaily.com
www.prajavani.net
www.sampuktakarnataka.com
ಕ್ರಾಂತಿ ಡೈಲಿ, ಪ್ರಜಾವಾಣಿ, ಸಂಮುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ
ಗಳ ಅಂತರ್ಜಾಲ ಆವೃತ್ತಿಗಳ ಬೆಳವಣಿಗೆಗೆ ಸಹಾಯ.
೧೯೯೭
ಮತ್ತು
೧೯೯೮
Akruti SDK & WDK
For developing client-server and web applications in kannada
೨೦೦0
cyBANK & cyCRED
ಸಹಕಾರಿ ಬ್ಯಾಂಕ್ ಗಳ ಬಳಕೆಗೆ
೨೦೦೧
eKaryalaya, eAdministration &
eGovernance
ಕರ್ನಾಟಕ ಸರ್ಕಾರಕ್ಕೆ ಹಾಗೂ ಇತರ ಸರ್ಕಾರಿ ಇಲಾಖೆಗಳಿಗೆ ಸಿದ್ದ ಪಡಿಸಿದ ಅನ್ವಯಿಕ ತಂತ್ರಾಂಶಗಳು
೨೦೦೨
cyDOCS
document management solution
೨೦೦೩
cyTRAN
report translator in kannada
೨೦೦೩
ಆಕೃತಿ ಯೂನಿಕೋಡ್ ಪಾಂಟ್ಸ್ Embedde thin clients ಪೊರ್ ಕನ್ನಡ
೨೦೦೪


ಈಗ AppleSoft ತಂತ್ರಾಂಶಗಳು

ಕ್ರ.ಸಂ
ತಂತ್ರಾಂಶದ ಹೆಸರು
ತಂತ್ರಾಂಶದ ಉದ್ದೇಶ/ಉಪಯೋಗ
ಇಸವಿ

ಸುರಭಿ
ಕನ್ನಡದಲ್ಲಿ MS Dos ಹಾಗೂ ಅನ್ವಯಿಕ ತಂತ್ರಾಂಶಗಳು.
೧೯೯೩

ಸುರಭಿ ಜೆಮ್
MS Dos ನಲ್ಲಿ ಕನ್ನಡ ಟೈಪಿಸಲು. ಮತ್ತು ಡಿ ಟಿ ಪಿ ತಂತ್ರಾಂಶ

ಸುರಭಿ ಪ್ರೊ
MS Windows ೩.೦ ನಲ್ಲಿ ಕನ್ನಡ/ಭಾರತೀಯ ಭಾಷೆಗಳನ್ನ ನೇರವಾಗಿ ಟೈಪಿಸಲು

ಸಿಪ್
ಅನೇಕ ಕಡತಗಳನ್ನ, ಅನೇಕ ಕಡಕಿಗಳನ್ನ, ಹಾಗೂ ಅತೀ ದೊಡ್ಡ ಕಡತಗಳನ್ನ ಬೆಂಬಲಿಸಿದ
ಪ್ರಪ್ರಥಮ ಕನ್ನಡ ಪದ ಸಂಸ್ಕರಣ

ಸುಬೇಸ್
ದತ್ತಾಂಶ ಸಂಸ್ಕರಣ ತಂತ್ರಾಂಶ

Surabhi SDK
MS Windows ನಲ್ಲಿ ಭಾರತೀಯ ಭಾಷೆಗಳಲ್ಲಿ ಅನ್ವಯಿಕ ತಂತ್ರಾಂಶಗಳ ಬೆಳವಣಿಗೆಗೆ

Surabhi 2000
SURABHI 2000 is an Input enabling software for Windows 95/98/NT 4.0/NTTSE/XP through the choice of keyboard layouts. It provides direct typing facilities using various standard keyboard layouts, enables Find and Replace, keyboarding is auto-sensitive, comes with collection of fonts and enables hot keys and shortcut keys. It works with all popular MS Windows based applications like MS Office, StarOffice, OpenOffice, Lotus Smart Suite, Pagemaker, Photoshop, Hot Potatoe etc.,.

SURABHI  UV
SURABHI UV is an Unicode Input enabling software for Windows XP through the choice of keyboard layouts. It provides direct typing facilities using various standard keyboard layouts, comes with collection of fonts and enables hot keys and shortcut keys. It works with all Unicode compliant MS Windows XP based applications like MS Office XP, StarOffice 6.0, OpenOffice 1.1, CorelDraw 12, Hot Potatoe 6.0 etc.,.

SURABHI TOOLS
SURABHI TOOLS, Is a collection of tools to support Indian Languages on the Tools of MS Office running on MS Windows. This includes tools such as Sorting, Text conversion, Auto correct, Date and Time, Numerals to text etc.
೧೦
SuJeeva
An interactive Web content enabling utility exclusively developed for Indian Languages to enable typing in Indian Languages in the Text fields, Text Area and Set fonts to Text fields, Text Area, Buttons and Body Text.
೧೨
e-Type
e-Type, is a compact embedded font solution developed exclusively to support Indian Languages and to facilitate localisation of Pagers, Mobile phones, Dot Matrix Printers and any digital gadgets. The compact code size also enables multi-lingual solutions in the power crunch digital gadgets. It is easy to implement, extremely portable and contains clear and understandable source code with documentation. With appropriate peripheral support like demo code, debug tools with source code and design manual, e-type enables excellent and seamless integration with short implementation period.
೧೩
Janani
Janani is first time effort to localize MS Windows 98 and applications running on it. Janani is a boon to Indians and Indian languages. Janani localises the User Interfaces such as Menus, Dialog boxes, Status bar texts, Help tips etc., of MS Windows 98 and enables seamless integration of Language and Technology.



ಭಾರತೀಯ ಭಾಷೆಗಳ ಗಣಕೀಕರಣದಲ್ಲಿ, ಕನ್ನಡದ ಗಣಕೀಕರಣದಲ್ಲಿ ಈಗಾಗಲೇ ಹಲವು ವರ್ಷಗಳ ಹಿಂದೆಯೇ ನಮ್ಮಲ್ಲಿ ಅನೇಕ ತಂತ್ರಜ್ಞರಿದ್ದರು, ತಂತ್ರಾಂಶಗಳಿದ್ದವು, ಹಾಗೂ ಅವುಗಳಿಗೆ ಬೇಡಿಕೆ ಮತ್ತು ಪೂರೈಕೆ ಎರ್ಡೂ ಸಮತೋಲವಾಗಿ ಸಾಗಿತ್ತಿದ್ದವು.
ಆದರೆ ಇಸವಿ ೨೦೦೦ ಅಥ್ವ ಅದ್ರಿಂದ ಈಚೆಗೆ ಈ ಕಾರ್ಯಗಳಲ್ಲಿ ಹಾಗೂ ಕಾರ್ಯಾಸಕ್ತರಲ್ಲಿ ಮೊದಲಿನ ವೇಗದಲ್ಲಿ ಕಂಡು ಬಂದ ಬೆಳವಣಿಗೆ ಈಗ ಕಂಡು ಬರುತ್ತಿಲ್ಲ. ಅವರಿಗೆ ಬೆಂಬಲವೂ ಇಲ್ಲ.

ಮುಖ್ಯವಾಗಿ ತಂತ್ರಜ್ಞಾನ ಬೆಳದಂತೆ ಕನ್ನಡದ ಗಣಕೀಕರಣವೂ ಸಾಕಷ್ಟು ಪ್ರಗತಿ ಸಾಧಿಸ ಬಹುದಿತ್ತು. ಆದರೆ ತಂತ್ರಜ್ಞಾನ ಬೆಳದಷ್ಟು ಕನ್ನಡದ ಗಣಕೀಕರಣ ಮಾತ್ರ ಹಿಂದೆ ಬೀಳ್ತಿದೆ ಅನ್ನೋ ಭಾವನೆ ಕಾಡ ತೊಡಗುತ್ತೆ.
ಅತ್ವ ಇದು ಕನ್ನಡ ಭಾಷೆಯ ಅವನತಿಯ ಮುನ್ಸೂಚನೆಯೇ? ತಿಳಿಯುತ್ತಿಲ್ಲ.

ಆ ತಂತ್ರಾಂಶಗಳು ಕಣ್ಮರೆಯಾಗಲು ಏನು ಕಾರ್ಣ ತಿಳಿಯ ಬೇಕಲ್ಲವೇ?

ನಮ್ಮೆಲ್ಲರ ಬಾಯಲ್ಲಿ ನಲಿಯುತ್ತಿರ್ರುವ ಕನ್ನಡದ ಹೆಮ್ಮೆಯ ನುಡಿ ಅಥ್ವ ಬರಹ ಗಳಿಂದ ಮಾತ್ರ ಮೇಲಿನ ತಂತ್ರಾಂಶಗಳ ಸ್ಥಾನವನ್ನ ತುಂಬಲು ಸಾದ್ಯವೇ?
ಸತ್ಯವೆಂದರೆ ನುಡಿ ಹಾಗೂ ಬರಹ ತಂತ್ರಾಂಶಗಳು ಆರಂಬದ ದಿನಗಳಲ್ಲಿ ಕೇವಲ ಕನ್ನಡದ ಮತ್ತೊಂದು ಪಾಂಟ್ ಗಳಾಗಿದ್ದವು,
ಆದರೆ ಉಳಿದ ತಂತ್ರಾಂಶಗಳ ಬೆಳವಣಿಗೆ ಏಕೆ ನಿಂತಿತು? ನಿಮ್ಮತ್ರ ಉತ್ತರವಿದೆಯೇ?



-
ಲೋದ್ಯಾಶಿ

ಮಾಹಿತಿ ಸಂಗ್ರಹ: ಈಕವಿವೇದಿಕೆ.


blogspot add widget