ಪ್ರಕೃತಿ ವಿಕೋಪಕ್ಕೆ ನಮ್ಮ ಜನ ಜೀವನ ದಿಕ್ಕಾ ಪಾಲಾಗಿರೋದು ಇದೇ ಮೊದ್ಲೆನಲ್ಲಾ...ಈ ಹಿಂದೆಯೂ ಆಗಿದೆ..ಮುಂಬೈಯಲ್ಲಿ ಬಾರೀ ಮಳೆ, ಗುಜರಾತ್ನಲ್ಲಿ ಭೂಕಂಪನ, ಕರಾವಳಿಯಲ್ಲಿ ಸುನಾಮಿ, ಅನಾವೃಷ್ಟಿಯಿಂದ ಕ್ಷಾಮ, ಹೀಗೇ ಅನೇಕ ಬಾರೀ ಅನಾಹುತಗಳು ಸಂಭವಿಸಿವೆ. ಇಂತಹ ಸಮಯದಲ್ಲೆಲ್ಲಾ ನಾವು ನಮ್ಮ ಬಂದುಗಳು, ಸಂಬಂದಿಗಳು, ಮೇಲ್ಜಾತಿ, ಕೀಳ್ಜಾತಿ, ಆಡಳಿತ ಪಕ್ಷ, ವಿರೋದ ಪಕ್ಷ, ಜಾತಿ, ಧರ್ಮ, ಮಠ, ಮತ, ಆಸ್ತಿ-ಪಾಸ್ತಿ ಅಂತ ಮೀನಾ ಮೇಷ ಮಾಡ್ದೆ, ನಮ್ಮಿನ್ದಾಗೋ ಸಹಾಯ ಮಾಡೋದು ಮರೀ ಬಾರ್ದು.
ಅತೀ ವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ "ಕ್ಷೀರ ಬಂಧು" ಪಟ್ಟ ಬೇಕಿತ್ತಾ? ಖಂಡಿತಾ ಇಲ್ಲಾ... ಆದ್ರೆ ಹಾಗಂತ ಈಗ ಮಂತ್ರಿಗಳನ್ನ ತರಾಟೆಗೆ ತೊಗೊಳ್ತಾ ಕುಂತ್ರೆ ನಷ್ಟ ಯಾರಿಗೆ ಸ್ವಾಮಿ. ಸ್ವಲ್ಪನಾದ್ರೂ ಆತ್ಮ ಸಾಕ್ಷಿ ಅನ್ನೋದಿದ್ರೆ, ಮಂತ್ರಿಗಳೇ ಬಂದು ಅಮೃತ ಹಸ್ತದಿಂದ ಈ ಸುಕಾರ್ಯಾ ಆರಂಬ ಆಗ್ಲಿ ಅಂತ ಜಗಳ ಮಾಡೋದು ಬೇಡ. ಒಳ್ಳೆ ಕೆಲ್ಸಗಳಲ್ಲಾದ್ರೂ ನಾವು ನಮ್ಮ ಒಗ್ಗಟ್ಟನ್ನ ಪ್ರದರ್ಶಿಸೋಣ.
ಪ್ರಧಾನ ಮಂತ್ರಿಗಳಿಂದ ಹಿಡ್ದು, ಸಾಫ್ಟ್ವೇರ್, ಬ್ಯಾಂಕ್, ಅದ್ಯಾಪಕರು, ವ್ಯದ್ಯರು, ದಲ್ಲಾಲರು, ರಿಯಲ್ ಎಸ್ಟೇಟ್ ಚಲನಚಿತ್ರ, ಪತ್ರಿಕೆ, ಕ್ರಿಕೆಟ್ ಆಟಗಾರರು, ವಾಣಿಜ್ಯೋದಿಮಿಗಳು ಹೀಗೇ ಎಲ್ಲಾ ಕ್ಷೇತ್ರದ ಎಲ್ಲಾ ನೌಕರರು ಸ್ವಾಯಿಚ್ಚೆಯಿಂದ ತಮ್ಮ ತಮ್ಮ ಒಂದೊಂದು ದಿನದ ಆದಾಯವನ್ನ ಇದರ ಸಲುವಾಗಿ ತೆಗೆದಿಡ್ಬೇಕು. ಈ ರೀತಿ ಸಂಗ್ರಹಿಸಿದ ಮೊತ್ತವನ್ನ ಯಾವ್ದಾದ್ರೂ ಒಂದು ಅನಾಮಿಕ ಪರಿಹಾರ ನಿಧಿ ಸಂಗ್ರಹಣೆ ಅನ್ನೋ ಇನ್ನೊಬ್ಬ ದಲ್ಲಾಳಿ ಕೈಗೆ ಕೊಟ್ಟು ಬಂದು ಕೈ ತೊಳ್ಕೋಲ್ಳೋ ಕೆಲ್ಸಾ ಮಾಡ್ಬೇಡಿ.
ಒಟ್ಟು ಮೊತ್ತಾನ, ನೀವೇ ಒಂದಿಬ್ರು ಸ್ನೇಹಿತರು ತೆಗೆದು ಕೊಂಡು, ಸಂಬಂದಿಸಿದ ಕ್ಷೇತ್ರಕ್ಕೆ ಖುದ್ದು ಹೋಗಿ, ಅಲ್ಲಿನ ಜನ ಒಮ್ಮೆ ನೋಡಿ. ಅವ್ರಿಗೆ ಬೇಕಾಗಿರೋದು ಕೇವಲ ಒಂದು ತುತ್ತು ಅನ್ನ ಅಷ್ಟೇ ಅಲ್ಲಾ, ಬದಲಾಗಿ, ಭವಿಷ್ಯದ ಬಗ್ಗೆ, ಜೀವನದ ಬಗ್ಗೆ ಒಂದೆರಡು ಧೈರ್ಯಾ ತುಂಬೋ ಮಾತುಗಳು. ಅದನ್ನ ನೀವೇ ಮಾಡಿ, ಒಂದೆರಡು ಧೈರ್ಯದ ಮಾತಾಡಿ. ಆಮೇಲೆ ಅವ್ರ ತುರ್ತು ಅವಶ್ಯಕತೆಗಳನ್ನ ಅರ್ಥ ಮಾಡ್ಕೊಂಡು, ನೀವು ತೆಗೆದು ಕೊಂಡು ಹೋಗಿರೋ ಹಣದಲ್ಲಿ ಎಷ್ಟು ಸಾದ್ಯವೋ ಅಷ್ಟು ಸಹಾಯ ಮಾಡಿ.
ನಿಮಗೆ ಅಂತಹ ಒಂದು ನಿಸ್ವಾರ್ಥ ಮನಸ್ಸು ಖಂಡಿತ ಇದೇ, ಅದಕ್ಕೆ ನೀವು ಈ ಬರಹನ ಓದುತ್ತಾ ಇರೋದೇ ಸಾಕ್ಷಿ. ಇದಾದ ಮೇಲೆ ನೋಡಿ, ಸರ್ಕಾರಕ್ಕೆ ತನ್ನ ಕರ್ತವ್ಯದ ಅರಿವು ಮೂಡದೆ ಇದ್ರೆ ಅದಕ್ಕೆ ತಕ್ಕ ಶಾಸ್ತೀನ ಪ್ರಕ್ರುತಿನೇ ಮಾಡುತ್ತೆ. ಆ ಕೆಲಸದ ಜವಾಬ್ದಾರಿನ ಆ ಸರ್ವಶಕ್ತನ ಮೇಲೆ ಬಿಡಿ. ಬನ್ನೀ ಇನ್ನೂ ತಡವೇನೂ ಆಗಿಲ್ಲಾ. ಕಾರ್ಯೋನ್ಮುಖರಾಗೋಣ.
ಮಹಾತ್ಮಾ ಗಾಂಧೀಜಿ ಯವರ ಜಯಂತಿ ದಿನ ಪ್ರತೀ ವರ್ಷ ಅವ್ರ ಫೋಟೋಕ್ಕೆ ಹೂವಿನ ಹಾರ ಹಾಕಿ, ಕೈ ಮುಗ್ದು, ಶಾಲಾ ಕಾಲೇಜ್ಗೆ, ಕಚೇರಿಗಳಿಗೆ ಒಂದೊಂದು ದಿನ ರಜೆ ತಗೊಂನ್ದರೆ ಸಾಕೆ?
"ಬದಲಾಗುಹುದು ಈ ಲೋಕ ನೀ ಬದಲಾದರೆ,
ಬದಲಾಗುಹುದು ಈ ಸಮಾಜ ನೀ ಮೊದಲಾದರೆ" - ಮಹಾತ್ಮಾ ಗಾಂಧೀಜಿ