ಮಾಧ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಾಧ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 1, 2009

ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು

ಕನ್ನಡ ರಾಜ್ಯೋತ್ಸವಕ್ಕೆ ಅಂತೇಳಿ ಕನ್ನಡ ಭಾಷಾಭಿಮಾನದ ವಿಶೇಷ ಬರಹ ಇದು. ಹಾಗಂತ ಇದ್ರಲ್ಲಿ ಯಾವ್ದನ್ನೂ ಹೊಸ್ದಾಗಿ ಬೇಯಿಸಿ ತಂದು ನಿಂಗೆ ಬಡಿಸ್ತಿರೊದಲ್ಲಾ. ಹತ್ತನೇ ತರಗತಿವರ್ಗೆ ಕನ್ನಡ ಮಾದ್ಯಮದಲ್ಲಿಯೇ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಓದ್ಕೊಂನ್ಡು ಬಂನ್ದೀರೊವ್ನು ನಾನು. ಹಾಗಾಗಿ ಅದ್ರ ಬಗ್ಗೆನೇ ಒಂನ್ದಿಷ್ಟು ಬರೀತಿದೀನಿ.

ಇಂಗ್ಳೀಷ್ ಮಾದ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ಧೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರುತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಂಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.

ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ?

ನಮಗಿಷ್ಟ ಬಂದ ಯಾವ್ದೇ ವಿಷಯವನ್ನಾಗಲಿ ಮಾತೃ ಭಾಷೆಯಲ್ಲಿಯೇ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾದ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾದ್ಯಮ ಅಂತಲ್ಲಾ. ಕಲಿಕೆಗೆ ಇಂಗ್ಲೀಷ್ ಮಾದ್ಯಮ ಒಂದು ಸೌಕರ್ಯ ಅಲ್ಲ. ಅದೊಂದು ನಮ್ಮನ್ನ ನಾವು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ತಳ್ಳಿಕೊಂಡು ಬಿದ್ದ ಉದಾಹರಣೆಯಷ್ಟೇ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.

ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾದ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ಆದ್ರೆ ನಮ್ಮಲ್ಲಿ ವಿಪರ್ಯಾಸವೆಂಬಂತೆ ವಿಗ್ನಾನವನ್ನ ಕಲಿಯೊಕ್ಕೆ ಇಂಗ್ಲೀಷ್ ಗೊತ್ತಿರ್ಲೇ ಬೇಕು ಅನ್ನೋ ಕಡ್ಡಾಯ ಇದೆ. ಕಾಗುಣಿತ ಕಲಿಯೊಕ್ಕೆ ಮೊದ್ಲೇ ಅ, ಆ, ಇ, ಈ ... ಕಲಿಲೇ ಬೇಕು ಒಪ್ಕೋಳೋಣ. ಆದ್ರೆ ವಿಗ್ನಾನ, ಗಣಿತ ಇಂತದ್ದೆಲ್ಲಾ ಕಲಿಯೊಕ್ಕೆ ಇಂಗ್ಲೀಷ್ ಕಡ್ಡಾಯ ಏಕೆ?

ಇವತ್ತು ನಮ್ದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಹಾ!!! ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.

ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
 * ಗಣಿತದ ಪ್ರಮೇಯಗಳ ನಿರೂಪಣೆಯೋ
 * ವಿಗ್ನಾನದಲ್ಲಿ ಬರೋ ನಾಮಪದಗಳೋ, ಕ್ರಿಯಾಪದಗಳೋ ಅಥ್ವಾ
 * ಇನ್ನೂ ಕೆಲ್ವು ಸಾಮಾನ್ಯ ಪದಗುಚ್ಚಗಳೋ
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾದ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು. ಇಲ್ದೇ ಹೊದ್ರೆ ಶಿಕ್ಶಣಿಕಿಂತ ಮೊದ್ಲೇ ಪರೀಕ್ಷೆಗಳನ್ನ ನಡೆಸ್ಬೌದಾಗಿತ್ತು.

ಇಂಗ್ಳೀಷ್ ಮಾದ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
 * ಇಂಗ್ಲೀಷ್ನಲ್ಲಿ ಈ ವಿಷ್ಯಗಳಿಗೆ ಸಂಬಂದಿಸಿದ ಕಠಿಣ ಪದಗಳೇ ಇಲ್ವೇ?
 * ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೂ ಅದನ್ಯಾರೂ ಬಳಸೊದೇ ಇಲ್ವೇ?
 * ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಅರ್ಥ ಆಗ್ಬೇಕು ತಾನೇ?
 * ಅಂಗಾದ್ರೇ, ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
 * ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
 * ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
 * ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
 * ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
 * ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅಂತಾದ್ರೆ ಕೆವ್ಲಾ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
 * ಆಗ, ನಂದೇಶದ ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?

ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
 * ಕಾಂನ್ವೆನ್ಟ್ ಗಳು
 * ಕಾಲೇಜ್ಗಳು
 * ವಿವಿದ ವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?

ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ? ಆದ್ರೆ ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಮತ್ತೆ ಅದನ್ನ ತಮ್ಮ ಅಭಿವೃದ್ದಿ ಸಂಖ್ಯೇತವಾಗಿ ಭಾವಿಸ್ತಾರಲ್ಲಾ? ಅದು ಯಾಕೆ?

ಈ ಪ್ರಶ್ನೆಗೆ ಉತ್ತರ ಸರಳ. ಬ್ರಿಟೀಷರು ನಮ್ಮ ಮೇಲೆ ಇನ್ನೂರು ವರ್ಷ ಸತತ್ವಾಗಿ ದಬ್ಬಾಳಿಕೆ ಮತ್ತೆ ಅತ್ಯಾಚಾರ ಮಾಡಿದ್ದೇ ಇದಕ್ಕೆಲ್ಲಾ ಮೂಲ ಕಾರ್ಣ.
ಇಲ್ದೇ ಹೋಗಿದ್ರೆ?
 * ಕನ್ನಡನೂ ಇಲ್ಲಾ
 * ಇಂಗ್ಲೀಷ್ ಕೂಡ ಇಲ್ಲಾ.

ಕೆಲ್ವು ಮೂಲಗಳ ಪ್ರಕಾರ, ಪ್ರಪಂಚದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಇಂಗ್ಲೀಷ್ ಮಾತಾಡೋವ್ರ ಜನಸಂಖ್ಯೆಯಲ್ಲಿ ನಮ್ದೇಶಕ್ಕೆ ತೃತೀಯ ಸ್ಥಾನ ಸಿಗುತ್ತಂತೆ. ತುಂಬಾ ಅದ್ಬುತ ಸಾಧನೆ ಅಲ್ವೇ? ನಮ್ದೇ ದೇಶದ ಪ್ರತಿಭೆಗಳನ್ನ ಬಲಸ್ಕೋಳ್ದೇ ಹೋದ್ರೂನೂ ಪರ್ವಾಗಿಲ್ಲಾ, ಪ್ರೋತ್ಸಾಸದೇ ಹೋದ್ರೂ ಪರ್ವಾಗಿಲ್ಲಾ, ನಮ್ಗೆ ಇಂಗ್ಲೀಷ್ ಮಾತಾಡಕ್ಕೆ ಮಾತ್ರ ಚೆನ್ನಾಗಿ ಬರುತ್ತೆ. ಶಬ್ಬಾಶ್!

ಇಂಗ್ಲೀಷ್ರು ಬಂದ್ರು ಮುಸಲ್ಮಾನ ದೊರೆಗಳು ಮಾಡ್ತಿದ್ದಾ ದಬ್ಬಾಳಿಕೆಯಿಂದ ನಮ್ಮ ಸಮಾಜನ ಬಚಾವ್ ಮಾಡಿದ್ರು, ಇಲ್ದೇ ಹೋಗಿದ್ರೆ? ಏನಾಗ್ತಿತ್ತು ಅಂತೇಳಿ ಕೊನೆಗೆ ಒಂದು ಹಾಸ್ಯ ಸಂಭಾಷಣೆಯೊಂದಿಗೆ ಈ ಬರಹನ ಮುಗಿಸ್ತೀನಿ

 "ಹೇಯ್, ನಿಂಬ್ದು ಬೇಟಾ, ಯಾವ್ದೂ ಭಾಷೇಲಿ ಓದ್ತದೆ?"

 "ಜಿ, ನಮ್ದುಗೆ ಬೇಟಾಗೆ, ಕನ್ನಡಾಗೆ ಓದ್ತದೆ."

 "ಹೇ! ನಿಂಮ್ದುಗೇ ಇನ್ನೂ ಯಾವ್ದೂಗೇ ಕಾಲ್ದಾಗೇ ಐತೆ? ಕನ್ನಡಾಗೆ ಕಲ್ತು ಏನು ಉಪ್ಯೊಗ ಆಯ್ತದೆ? ಅನ್ತ ಕಳೀಸ್ತೀರಿ?"

 "ಜಿ, ಯಾಕೇ? ಈಗ ನಂಮ್ದುಗೇ ಏನಾತು?"

 "ನಮ್ದುಗೆ ನವಾಬಂಗೆ ಹೇಳಿದ್ದು ನಿಮ್ಗೆ ಇನ್ನೂ ಗೊತ್ತಾಗಿಲ್ಲಾ? ಎಲ್ರೂ ಉರ್ದೂಗೆ ಭಾಷೇಲೀ ಕಲ್ಸಿ ಅಂತ ಹೇಳಿದಾರೆ! ಮುಂದೆ, ಮಕ್ಳಿಗೇ ಇಗ್ನಾನ, ಗಣಿತ ಕಲಿಯಕ್ಕೆ ಶಾನಾ ಸುಲ್ಬಾ ಆಯ್ತಾದಂತೆ!"

 "ಹೌದಾಜೀ, ಇದು ನಮ್ದುಗೇ ಗೊತ್ತೇ ಇರ್ಲಿಲ್ಲಾ. ಇಗೋ ಈಗ್ಲೇ ಹೋಗಿ, ನಂಮ್ದುಗೇ ಬೇಟಾಂದು, ಉರ್ದುಗೇ ಮಾದ್ಯಾಮಕ್ಕೆ  ಸೇರಿಸ್ತದೆ!, ಜೈ ನವಾಬ್"

ಜೈ ಹಿಂದ್ ,
ಜೈ ಕರ್ನಾಟಕ ಮಾತೆ.

ಬುಧವಾರ, ಸೆಪ್ಟೆಂಬರ್ 23, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 2

"ಭಾಷೆ, ಮಾಧ್ಯಮ ಹಾಗೂ ಕಲಿಕೆ - ೧" ಬರಹ, ಎಷ್ಟು ಓದುಗರಿಗೆ ಆಸಕ್ತಿಂದ ಕೂಡಿತ್ತು ಅಂತ ನನಿಗೆ ಅಷ್ಟು ತಿಳಿದಿಲ್ಲಾ, ಆದ್ರೆ, ಅದರ ಇನ್ನೊಂದು ಭಾಗ ಇಲ್ಲಿ ಹಾಕಿದ್ದೀನಿ. ಸುಮ್ಮನೇ ಯಾಕಪ್ಪಾ ಈ ಜೀವಿ ಇಷ್ಟೊಂದು ಉದ್ದುದ್ದಾ ಬರ್ದು ಹಾಕಿ, ವೃತಾ ಶ್ರಮ ತಗೊಂತಾನಪ್ಪಾ. ಅಂತನ್ಸಿದ್ರೆ ಹೇಳ್ಬಿಡ್ರಿ.


ಈ ನಡುವೆ ಕೆಳಗಿನ ಎರಡು ಬ್ಲಾಗ್ಗಳಲ್ಲಿ ಅಡ್ಡಾಡ್ತಿರ್ಬೇಕಾಂದ್ರೆ ,
"ನೀವು ನಕ್ಕರೆ ಹಾಲು ಸಕ್ಕರೆ"
"ಯಳವತ್ತಿ ಬ್ಲಾಗ್...".
ನಾನೂ ಯಾಕೆ ಒಂದೆರಡು ಹಾಸ್ಯ ಬರಹ ಬರಿ ಬಾರದು ಅಂತೇನೂ ಅನ್ನಿಸ್ಲಿಲ್ಲಾ...ಆದ್ರೆ ನನ್ನ ಅನುಭವಗಳೇ ಕೆಲವು ಭಾರಿ ಹಾಸ್ಯ ಹಾಗ್ಬಿಟ್ತಿವೆ. ಹಾಗಾಗಿ ನೆನಪಿಗೆ ಸಿಕ್ಕಂತಹ ಕೆಲವು ಘಟನೆಗಳನ್ನ ಬರೀತಿದ್ದೀನಿ. ಶೀರ್ಷಿಕೆ ಏನೂ ಅಂದ್ರೆ, "ಹಾಸ್ಯ ಸನ್ನಿವೇಶದ ಕೆಲವು ತುಂಡುಗಳು!"


ಆದ್ರೆ ಅದಕ್ಕಿಂತ ಮೊದಲೇ, ಇದನ್ನ ಓದಿ ಬಿಡಿ. ಈ ಕೆಳ ಕಂಡ ಬರಹ ಇಷ್ಟ ಹಾಗ್ದೆ ಇದ್ರೆ ಅದನ್ನೇ ದೊಡ್ದು ಮಾಡ್ಬೇಡ್ರಿ. ಪುನಃ ಬರ್ತಾ ಇರ್ರಿ.. ಹೊಸ ಪೋಸ್ಟ್ ಇರುತ್ವೆ.


--------------------------------------------------------------------------------
ಇಲ್ಲಿಂದಾ ಮುಂದುವರೆದಿದೆ...


ಭಾಷೆ ಕೇವಲ ಒಂದು ಸಂಪರ್ಕ ಸಾಧನ ಅಷ್ಟೇ. ಅದ್ರಿನ್ದಾನೇ ಎಲ್ಲಾ ಅನ್ನೋದು ಎಷ್ಟು ಸರಿ? ವಿಷಯ ಜ್ಞಾನ ಬೆಳಸಿ ಕೊಳ್ಳೋಕ್ಕೆ ಪ್ರತಿಯೊಬ್ರಿಗೂ ಅವಕಾಶ ಇರ್ಬೇಕು, ಅದು ಯಾವ ಮಾದ್ಯಮದಲ್ಲಿ ಅನ್ನೋದು ತುಂಬಾ ಸಾಧಾರಣ ಪ್ರಶ್ನೆ ಆಗ್ಬಿಡುತ್ತೆ. ನನಗೆ ಕನ್ನಡ ಚೆನ್ನಾಗಿ ಗೊತ್ತು. ಯಾಕಂದ್ರೆ ನಾನು ಶಾಲೆಯಲ್ಲಿ ಮೇಷ್ಟ್ರು ಹೇಳ್ಕೋಡೋಕ್ಕೇ ಮೊದ್ಲೇ ನಮ್ಮ ಮನೇಲೆ ಮಾತಾಡೋದು ಕಲ್ತಿದ್ದೆ.


ನಮಿಗೆ ಮೊದ್ಲು ಮೊದ್ಲು ಇಂಗ್ಲೀಶ್ ಹೇಳ್ಕೋಟ್ಟಾಗ ನಾವು ಹೇಗೆ ಕಲೀತಿದ್ವಿ? ಅದನ್ನ ಕನ್ನಡಕ್ಕೆ ಅನುವಾದ ಮಾಡ್ಕಂಡು ಅಭ್ಯಾಸ ಮಾಡ್ತಿದ್ವಿ. ಆಮೇಲೆ ನಿಧಾನಕ್ಕೆ ವಾಕ್ಯ ಮಾಡೋದು ಕಲ್ತ್ವಿ. ಆಮೇಲೆ ಪುಸ್ತಕ ಓದೋದು ಕಲ್ತಿವಿ. ಈಗ ಇಂಗ್ಲಿಷ್ನಲ್ಲೇ ಮಾತೂ ಆಡ್ತೀವಿ.


ನಮಗೆ ಸ್ಕೂಲ್ನಲ್ಲಿ ಇಂಗ್ಲಿಷ್ನ ಮೊದ್ಲು ಮೊದ್ಲು ಹೇಳ್ಕೋಟ್ಟಾಗ ನಾನು ಹೇಗೆ ಯೋಚಿಸ್ತಿದ್ದೆ ಅಂತ ಗೊತ್ತೇ? ಇಂಗ್ಲೀಷ್ನ ಮೊದ್ಲು ಮೊದ್ಲು ಕಲಿ ಬೇಕಾದರೆ, ಜಗತ್ತಲ್ಲಿ ಎಲ್ಲರೂ ಸಹ, ಇಂಗ್ಲೀಶ್ ವಾಕ್ಯಗಳ ಅರ್ಥವನ್ನ ಮೊದಲು ಕನ್ನಡಕ್ಕೇ ಅನುವಾದ ಮಾಡ್ಕಂಡು ಕಲಿತಾರೆ. ಆಮೇಲೆ ನಿಧಾನಕ್ಕೆ ಇಂಗ್ಲಿಷ್ನಲ್ಲೇ ಮಾತಾಡೋದು ಕಲಿತಾರೆ. ಮಾತಾಡೋದು ಕಲಿತಮೇಲೆ ಇಂಗ್ಲಿಷ್ ಪುಸ್ತಕ ಅರಾಮಾಗಿ ಓದ್ಬೋಹುದು ಅಂತ.


ಆಗಂತ ಭಾಷೆಗೆ ಮಹತ್ವವೇ ಇಲ್ಲ ಅನ್ನೋದು ಎಷ್ಟು ಸರಿ? ಪ್ರತಿ ಭಾಷೆಗೂ ಅದರದೇ ಆದ ಮಹತ್ವವಿರುತ್ತೆ. ಅದರ ಅಸ್ತಿತ್ವ ಅದಕ್ಕೆ ಅಷ್ಟು ಸುಲಭವಾಗಿ ದಕ್ಕಿದುದಾಗಿರುವುದಿಲ್ಲ. ಉದಾಹರಣೆಗೆ ಸಂಸ್ಕೃತ ಅನ್ನೋದು ಒಂದು ಸತ್ತ, ಮೃತ ಭಾಷೆ ಅಂತೆಲ್ಲಾ ಜನ ಹೇಳೋದು, ಬರಿಯೋದು ಕೇಳಿದ್ದೇನೆ, ನೋಡಿದ್ದೇನೆ. ನಾನೊಬ್ಬ ಭಾಷಾ ತಜ್ಞನಲ್ಲ, ಆಗಂತ ಇಂತ ಚಾಣಾಕ್ಷ್ಯ ತೀರ್ಮಾನಗಳನ್ನ ಕಂಡಾಗ ಮನಸ್ಸು ತೀರಾ ಕುಪಿತಗೊಳ್ಳುತ್ತೆ. ನಾನು ಸಂಸ್ಕೃತ ಶಿಕ್ಷಕನೂ ಅಲ್ಲ, ಸಂಸ್ಕೃತ ವಿದ್ಯಾರ್ಥಿಯೂ ಅಲ್ಲ. ಆದ್ರೆ ಇಂತಹ ಅತಿರೇಕಿಗಳನ್ನ ಗಮನಿಸಿ ಈಗೀಗ ಸ್ವಲ್ಪ ಸಂಸ್ಕೃತದ ಬಗ್ಗೆ ಓದಿ ತಿಳೀತ ಇದ್ದೇನೆ ಅಷ್ಟೇ. 2006 ರ ಸಾಲಿನ " ಜ್ಞಾನಪೀಠ" ಪ್ರಶಸ್ತಿ ಲಭಿಸಿರೋದು ಸಂಸ್ಕೃತಕ್ಕೆ. ಸಂಸ್ಕೃತದಲ್ಲಿಯೂ ಬೆಳವಣಿಗೆಗಳು ಆಗ್ತಿರೋದಕ್ಕೆ ಇದಕ್ಕಿನ್ನ ಸಾಕ್ಷಿ ಬೇಕೇ?


ನನ್ನ ಪ್ರಕಾರ, ಒಬ್ಬ ವ್ಯಕ್ತಿಯ ಜ್ಞಾನದ ವಿಶಾಲತೆಯನ್ನ ಅಳಿಯಲಿಕ್ಕೆ ಇರೋ ಒಂದು ಸುಲಭ ಸಾಧನ ಅಂದ್ರೆ ಏನು ಗೊತ್ತೇ? ಅದು ವ್ಯಕ್ತಿಯ ಪದಕೋಶದ ವಿಶಾಲತೆಯನ್ನ ತಿಳಿಯೋದು. ಪದಕೋಶದ ವಿಶಾಲತೆಗೆ ಸಮಾನ ಅನುಪಾತದಲ್ಲಿ ಇರುತ್ತೆ ವಿಷಯ ಜ್ಞಾನ. ಹೆಚ್ಚು ಹೆಚ್ಚು ಅರ್ಥ ಗರ್ಭಿತ ಪದಗಳನ್ನ, ಪದ ಗುಚ್ಚದಳನ್ನ, ನುಡಿಗಳನ್ನ ಸಂಧರ್ಬಕ್ಕೆ ಅನುಗುಣವಾಗಿ ಯಾರು ಸರಾಗವಾಗಿ ಬಳಸ್ತಾನೋ ಅವ್ನಿಗೆ ವಿಷಯ ಜ್ಞಾನ ಸಾಕಷ್ಟು ಇರುತ್ತೆ.


ನಮ್ಮ ಕನ್ನದಲ್ಲಿರೋ ಪ್ರತಿಶತ 50 ಪದಗಳು ಸಂಸ್ಕೃತದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಂದಿವೆ. ಇಂತಹ ಪದಗಳ ಬಳಕೆಯಿಂದ ನಮ್ಮ ಪದಕೊಶವನ್ನೂ ನಾವು ವಿಸ್ತರಿಸಿ ಕೊಂಡಿದ್ದೇವೆ. ಇಂಗ್ಲೀಷ ನಲ್ಲಿ ಅನೇಕ ಪದಗಳಿಗೆ ಮೂಲ ಸಂಸ್ಕೃತದಲ್ಲಿದೆ.
ಉದಾಹರಣೆಗೆ
ಮಾತೃ = ಮದರ್ (father)
ಪಿತೃ = ಫಾದರ್ (mother)
ದ್ವಾರ = ಡೋರ್ (door)
ನಾಮಃ = ನೇಮ್ (name)
ಸ್ಮಿತ್ = ಸ್ಮೈಲ್ (smile)
ಏಕ = ಈಕ್ವಲ್ (equal)
ದಂತ್ = ಡೆಂಟಲ್ (dental)
ಪಥ್ = ಪಾಥ್ (path)


ಇಲ್ಲಿ ಕ್ಲಿಕ್ಕಿಸಿ


ಒಂದು ಭಾಷೆ ಒಂದ್ಸಾರಿ ಅಸ್ತಿತ್ವಕ್ಕೆ ಬಂದ ನಂತರ, ಅದರಿಂದ ಹೆಚ್ಚಿನ ಅನುಕೂಲಗಳೂ ಸಾದ್ಯ. ಉದಾಹರಣೆಗೆ ಒಂದು ಪೀಳಿಗೆ ಇಂದ ಮುಂದಿನ ಹಲವಾರು ಪೀಳಿಗೆಗಳಿಗೆ ಜೀವನದ ಕಲೆಯನ್ನ ತಿಳಿಸಿ ಕೊಟ್ಟಂತಹ "ಭಗವದ್ಗೀತೆ" ಆಗಿರ್ಬೌದು ಅಥವ ಡಿ, ವಿ, ಜಿ, ಯವರ "ಮಂಕುತಿಮ್ಮನ ಕಗ್ಗ" ಆಗಿರ್ಬೌದು. ಒಂದು ಸಂಸ್ಕೃತ ದಲ್ಲಿದ್ರೆ, ಇನ್ನೊಂದು ಕನ್ನಡದಲ್ಲಿದೆ. ಮತ್ತೆ ಬಸವಣ್ಣನವರು ಮುಂತಾದವರ ವಚನಗಳಿರ ಬಹುದು. ಇಂತಹ ಗ್ರಂಥಗಳಿಂದ, ಸಾಹಿತ್ಯಗಳಿಂದ ಆಯಾ ಭಾಷೆಗಳ ಮಹತ್ವವೂ ಹೆಚ್ಚುತ್ತಾ ಹೋಗುತ್ತೆ.


ನಾವು ನಮ್ಮ ಭಾಷೆಗೆ ನೀಡ ಬಹುದಾದ ಒಂದು ಅಲ್ಪ ಕೊಡುಗೆ ಅಂದ್ರೆ, ನಮ್ಮ ತಿಳಿವಳಿಕೆಯನ್ನ, ಅರಿವನ್ನ, ಜ್ಞಾನವನ್ನ ಬರವಣಿಗೆ ರೂಪದಲ್ಲಿ ಹಂಚಿಕೊಳ್ಳೋದು. ಈ ರೀತಿಯಾಗಿ ಅಪಾರ ಜ್ಞಾನವನ್ನ ಪೀಳಿಗೆ ಇಂದ ಪೀಳಿಗೆಗೆ ವರ್ಗಾಯಿಸಬಹುದು. ಹಾಗಾಗಿಯೇ ಭಾಷೆಯ ಪೋಷಣೆ ನಮ್ಮಗಳ ಅಲಿಖಿತ ಕರ್ತವ್ಯ ಆಗ್ಬಿಡುತ್ತೆ. ಭಾಷಾ ಪ್ರೇಮ ತಪ್ಪಲ್ಲ. ಆದ್ರೆ ಅದು ಅತಿರೇಕಕ್ಕೆ ಹೋಗಿ, ಇನ್ನೊಂದು ಭಾಷೆನ ತುಳಿಯೋ ಮಟ್ಟಕ್ಕೆ ಹೋಗೋದು ಒಂದು ಆರೋಗ್ಯಕಾರಿ ಬೆಳವಣಿಗೆ ಅಲ್ಲವೇ ಅಲ್ಲ.


ಈಗಿನ ಸದ್ಯ ಪ್ರಪಂಚದಲ್ಲಿ ಹೆಚ್ಚು ಕಮ್ಮಿ 6000 ವಿವಿದ ಭಾಷೆಗಳು ಇವೆಯಂತೆ. ನಮ್ಮ ಕನ್ನಡನೂ ಇದ್ರಲ್ಲಿ ಒಂದು. ನಾವು ಕರ್ನಾಟಕದಲ್ಲಿ ಕನ್ನಡ ಹೊರತಾಗಿ, ಹಿಂದಿ, ಇಂಗ್ಲೀಶ್, ಕೊಂಕಣಿ. ತುಳು ಇನ್ನೂ ಅನೇಕ ಭಾಷೆಗಳನ್ನ ಮಾತಾಡ್ತೀವಿ/ಮಾತಾಡ್ತಾರೆ. ಇನ್ನ ಬಾರ್ಡರ್ ಅತ್ರ ಇರೋ ಊರ್ಗಳಿಗೆ ಹೋದ್ರೆ ಅಲ್ಲಿ ತೆಲುಗು, ತಮಿಳು, ಮರಾಠಿ, ಮಲಯಾಳಂ ಭಾಷೆ ಮಾತಾಡೋರೂ ಸಿಗ್ತಾರೆ.


ಕನ್ನಡ ಭಾಷೇನೆ ನಾಲ್ಕಾರು ವಿವಿದ ಶೈಲಿಯಲ್ಲಿ ಮಾತಡೋದು ನಮಗೆಲ್ಲ ಗೊತ್ತಿರೋದೆ.
  • ಕುಂದಾಪುರ ಕನ್ನಡ.
  • ಶಿರಸಿ ಕನ್ನಡ. 
  • ಹುಬ್ಬಳ್ಳಿ-ಧಾರವಾಡ ಕನ್ನಡ.
  • ಬೆಂಗಳೂರು ಕನ್ನಡ.
  • ಚಿತ್ರದುರ್ಗ ಕನ್ನಡ 
  • ಗುಲ್ಬರ್ಗ ಕನ್ನಡ
ಒಂದು ಅಂದಾಜಿನ ಪ್ರಕಾರ, ಕನ್ನಡ ಭಾಷೇನೆ, ಹೆಚ್ಚು ಕಮ್ಮಿ 20 ವಿವಿದ ರೀತಿಗಳಲ್ಲಿ ಮಾತಾಡ್ತಾರೆ. ಮಾತಾಡೋ ಶೈಲಿ ಬೇರೆ ಬೇರೆ ಇದ್ರೂ ಬರಿಯೋಕಂತ ಇರೋದು ಒಂದೇ ಒಂದು ಅದೇ ಕನ್ನಡ ಲಿಪಿ. ಅ, ಆ, ಇ, ಈ...ಕಾಗುಣಿತ


ಕನ್ನಡಕ್ಕೆ ಮೂಲ/ಮಾತೃ ಭಾಷೆ ಸಂಸ್ಕೃತ. ಇದು ಕನ್ನಡಕ್ಕಷ್ಟೇ ಅಲ್ಲ, ಭಾರತದ ಸರಾಸರಿ ಎಲ್ಲಾ ಭಾಷೆಗಳಿಗೂ ಮಾತೃ ಭಾಷೆ ಅಂತ ನಾವೆಲ್ಲಾ ಒಪ್ಕೋಳ್ಳಲೇ ಬೇಕು. ಕನ್ನಡ ಮಾತಾಡೋರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆಯೇ, ಪ್ರಪಂಚದ ಇನ್ನೂ ಅನೇಕ ರಾಷ್ಟ್ರಗಳಲ್ಲಿಯೂ ಇದ್ದಾರೆ. ಅಮೇರಿಕ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಯುರೋಪ್ ಹೀಗೆ ಎಲ್ಲಾ ಭಾಗದಲ್ಲಿಯೂ ಇದ್ದಾರೆ. ಅಷ್ಟೇ ಏಕೆ, ಭಾರತದ ಇತರೆ ರಾಜ್ಯಗಳಲ್ಲಿಯೂ ಇದ್ದಾರೆ.


ಇಡೀ ಭೂಮಿಗೆ ಹೋಲಿಸಿದರೆ, ಬೌಗೋಳಿಕವಾಗಿ ಕರ್ನಾಟಕ ಎಷ್ಟು ದೊಡ್ಡ ಪ್ರದೇಶ? ಈ ಪ್ರಪಂಚದಲ್ಲಿ ಕನ್ನಡ ಮಾತಾಡೋವ್ರು ಎಷ್ಟು ಜನ?


ಇಷ್ಟರಲ್ಲಿಯೇ ಎಷ್ಟೊಂದು ವೈವಿದ್ಯತೆ. ಅಲ್ವ? ಇದಕ್ಕೆ ಹೋಲಿಸಿದರೆ ಪ್ರಪಂಚದ 6000 ಭಾಷೆಗಳಲ್ಲಿ ಇನ್ನೂ ಅದೆಷ್ಟು ವೈವಿದ್ಯತೆ ಇರಬೇಡ? ಇಷ್ಟೆಲ್ಲಾ ಭಾಷೆಗಳಲ್ಲಿ ಒಟ್ಟು ಅದೆಷ್ಟು ಜ್ಞಾನ ಇರಬೇಡ? ಸರಾಸರಿಯಾಗಿ ಪ್ರತಿ ಒಬ್ಬ ಮನುಷ್ಯ ಮೂರ್ನಾಲ್ಕು ಭಾಷೆ ಕಲಿತರೆ ಹೆಚ್ಚು. ಸಂಸ್ಕೃತ ಕಲೀರಿ, ಇಂಗ್ಲೀಶ್ ಕಲೀರಿ, ಹಿಂದಿ ಕಲೀರಿ, ಫ್ರೆಂಚ್ ಕಲೀರಿ, ಜರ್ಮನ್ ಕಲೀರಿ ಆದ್ರೆ ಕನ್ನಡ ಗೋತ್ತಿರೋ ವ್ಯಕ್ತಿ ಹತ್ರನಾದ್ರೂ ಕನ್ನಡದಲ್ಲೇ ಮಾತಾಡಿ. ಸಾಧ್ಯವಾದ ಕಡೆಗಳಲ್ಲೆಲ್ಲ ಕನ್ನಡ ಬಳಸಿ. ನಾವು ಬೇರೆ ಬೇರೆ ಭಾಷೆನ ಉಳಿಸಿ, ಬೆಳೆಸೋ ಪ್ರಯತ್ನ ಮಾಡ್ದೆ ಇದ್ರೂ ಪರ್ವಾಗಿಲ್ಲಾ, ಆದ್ರೆ ನಮ್ಮ ನಮ್ಮ ಮಾತೃ ಭಾಷೆನ ಉಳಿಸಲೇ ಬೇಕು, ಬೆಳಸಲೇ ಬೇಕು.


ಉಳಿದ ಭಾಷೆಗಳಲ್ಲಿ ಅದಿಲ್ಲಾ, ಇದಿಲ್ಲಾ, ಅದು ಸತ್ತ ಭಾಷೆ, ಇದು ಸುಟ್ಟ ಭಾಷೆ ಅಂತ ಕೀಳಾಗಿ ಯಾವ ಭಾಷೇನೂ ನೋಡೋ ಅಗತ್ಯ ಇಲ್ಲಾ. ಅಂತಹ ಸಂಧರ್ಬ ಸೃಷ್ಟಿ ಆಗೋದೂ ಬೇಡ.


ಶುಕ್ರವಾರ, ಸೆಪ್ಟೆಂಬರ್ 18, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 1


ಭಾಷೆಯಂದ್ರೆ ಮುಖ್ಯವಾಗಿ ಬೇಕಾಗೋದು ಎನುಕ್ಕೆ? ಅನುಭವ-ಅನಿಸಿಕೆ ಗಳನ್ನ, ವಿಚಾರಗಳನ್ನ, ಹಾಗು-ಹೋಗುಗಳನ್ನ, ವಿಷಯಗಳನ್ನ ಪರಸ್ಪರ ವಿನಿಮಯ ಮಾಡ್ಕೊಳ್ಳೋಕೆ. ಹೇಳೋಕ್ಕೆ ಒಬ್ರು-ಕೇಳೋಕ್ಕೆ ಇನ್ನೊಬ್ರು, ಟೋಟಲಿ ಇಬ್ರು ಇದ್ರೆ ಸಾಕು, ಅವರಿಬ್ಬರಿಗೆ ಮಾತ್ರಾನೇ ಅರ್ಥ ಆದ್ರುನೂ ಸಾಕು. ಇಲ್ಲಿ ಪರಸ್ಪರ ಒಂದೇ ತೀರ್ಮಾನಕ್ಕೆ ಬರ್ಲೆ ಬೇಕು ಅಂತೇನೂ ಇಲ್ಲ. ಒಟ್ಟಿನಲ್ಲಿ ಸಂಪರ್ಕ ಏರ್ಪಟ್ಟರೆ ಅಷ್ಟೇ ಸಾಕು.

ಮಾನವನ ನಾಗರೀಕತೆ ದಿನಗಳಿಂದ ಗಮನಿಸಿದರೆ, ಆಗೆಲ್ಲಾ ಇಬ್ರಿಗೆ ಅಥವ ಮೂವರಿಗೆ ಸಾಮಾನ್ಯವಾಗಿ ಅರ್ಥ ಆಗ್ತಿದ್ದಾ ಒಂದೇ ಭಾಷೆ ಅಂತಾನೇ ಇರ್ಲಿಲ್ಲ. ಎಲ್ಲಾ ಮುಖಾಭಿನಯ!!!
ಇಲ್ಲಿ ವಿಷಯ ಅಂಚಿ ಕೊಳ್ಳೋಕ್ಕೆ ಒಂದು ಮಾಧ್ಯಮ ಬೇಕಿತ್ತು, ಅದು ಯಾವ್ದಾದರೂ ಪರವಾಗಿರ್ಲಿಲ್ಲಾ. ಶೀಟಿ ಹೊಡಿಯೋದು, ಜೋರಾಗಿ ಕೂಗಿ ಕೊಳ್ಳೋದು, ಬಿದ್ದು ಒದ್ದಾಡೋದು. ಒಂದು ರೀತಿಲಿ ಮಾತು ಬರದ ಒಂದು ಮಗು ಹೇಗೆ ತನಗೆ ಬೇಕಿನಿಸಿದ್ದನ್ನ ತನ್ನ ತಾಯಿ ಅತ್ರ ಹಠ ಮಾಡಿ ಕೇಳ್ತಿರುತ್ತೋ ಹಾಗೇ. ಎಲ್ಲಾ ಬರೀ ಸಂಜ್ಞೆ.

ಕಾಲ ಕ್ರಮೇಣ ಇಂತಹ ಒಂದೊಂದು ಸಂಜ್ಞೆಗೂ ಒಂದೊಂದು ಅರ್ಥ ಬೆಳಿಸಿ ಕೊಳ್ತಾ ಬಂದ್ರು, ತಮ್ಮ ಕಷ್ಟ ಸುಖಗಳನ್ನ ಪರಸ್ಪರ ಹಂಚಿ ಕೊಳ್ಲೋಕ್ಕೆ ಅನುಕೂಲ ಆಯ್ತು. ಜೀವನ ಕ್ರಮ ಸುಧಾರಿಸ್ತಾ ಹೋಯ್ತು. ಉದಾಹರಣೆಗೆ ಈಗಲೂ ಆಸಕ್ತಿ ತರೋ ಕೆಲವು ಸಜ್ಞೆಗಳನ್ನ ನೋಡೋಣ. 
ಕೆಲವು ಪ್ರಶ್ನೆಗಳಿಗೆ ನಾವು ಸರಿ, ತಪ್ಪು ಅಥವಾ ಹೌದು, ಅಲ್ಲ ಅಂತ ಸರಳವಾಗಿ ಉತ್ತರಿಸಬಹುದು, ಅದಕ್ಕೆ ನಾವು ಸಾಮಾನ್ಯವಾಗಿ ಅನುಸರಿಸೋ ಸಂಜ್ಞೆ ಅಂದ್ರೆ, ನಮ್ಮ ಕತ್ತನ್ನ (ಕುತ್ತಿಗೆ) ಮೇಲೆ-ಕೆಳಗೆ ಅಥವಾ ಎಡಕ್ಕೆ-ಬಲಕ್ಕೆ ಆಡಿಸೋದು.
ಮೇಲೆ-ಕೆಳಗೆ ಆಡಿಸಿದರೆ ಅದು ಸರಿ, ಹೌದು ಅಂತಲೂ, ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದು ತಪ್ಪು ಅಥವ ಅಲ್ಲ ಅಂತಲೂ ಅರ್ಥ ಮಾಡ್ಕೊಂತೀವಿ.

ಆಗಂತ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದೆ ರೀತಿ ಅರ್ಥ ಮಾಡ್ಕೊಂತಾರೆ ಅಂತೇನೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಯಾರಾದರೂ ಪ್ರಶ್ನೆಗೆ ಕತ್ತನ್ನ ಮೇಲೆ-ಕೆಳಗೆ, ಅಥವ ಎಡಕ್ಕೆ-ಬಲಕ್ಕೆ ತಿರುಗಿಸಿದರೆ ಅವ್ರು ಏನೂ ಅರ್ಥ ಮಾಡ್ಕನಲ್ಲಾ!! ಬದಲಾಗಿ ನೀನು ಎಲ್ಲೋ ಸೊಳ್ಳೆನೋ, ನೋಣನೋ ಓಡಿಸ್ತಿರ ಬೇಕು ಅಂತ ಸುಮ್ನೆ ಉತ್ತರಕ್ಕೆ ಕಾಯ್ತಾ ನಿನ್ನ ಮುಖನೇ ನೋಡ್ತಾರೆ. ಅಲ್ಲಿ "ಯಸ್" ಅಥವಾ "ನೋ" ಅಂತ ಬಾಯಿಬಿಟ್ಟು ಹೇಳಲೇ ಬೇಕು.

ಇನ್ನೂ ಇದೇ ಸಜ್ಞೆನ ಇನ್ನೂ ಕೆಲವು ಕಡೆ, (ಉದಾಹರಣೆಗೆ ಬಲ್ಗೇರಿಯ) ಉಲ್ಟಾ ಸೀದಾ ಅರ್ಥ ಮಾಡ್ಕೊಂತಾರಂತೆ. ಅಂದ್ರೆ, ಕತ್ತನ್ನ ಮೇಲೆ-ಕೆಳಗೆ ಆಡಿಸಿದರೆ ಅದಕ್ಕೆ ನಿನ್ನ ಒಪ್ಪಿಗೆ ಇಲ್ಲ, ಅದು ತಪ್ಪು ಅಂತಲೂ ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದಕ್ಕೆ ನಿನ್ನ ಉತ್ತರ ಹೌದು, ಅದು ಸರಿ ಅಂತಲೂ ಅರ್ಥ ಮಾಡ್ಕೊಂತಾರಂತೆ.

ನಮ್ಮ ದೇಶದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಾಗ ಎರಡು ಕೈ ಎತ್ತಿ, ನಮ್ಮ ಎದೆ ನಡುವೆ ನಮ್ಮ ಹಸ್ತವನ್ನ ಒಂದಕ್ಕೊಂದು ಜೋಡಿಸಿ ಮುಗಿದು, ನಂತರ "ನಮಸ್ಕಾರ" ಅಂತ ಹೇಳ್ತೀವಿ. ಇದು ಪರಸ್ಪರರಿಗೆ ಗೌರವ ಸೂಚಕವೂ ಅವ್ದು. 
ಇದನ್ನೇ ಮುಸ್ಲೀಂ ರಾಷ್ಟ್ರಗಳಲ್ಲಿ ಹೋದರೆ, ಒಂದು ಕೈ ಮಾತ್ರ ಎದೆ ಮುಂದೆ ತಂದು, ತಮ್ಮ ಹಸ್ತ ತಮ್ಮ ಎದೆ ಕಡೆಗೆ ತಿರುಗಿಸಿ, ಸ್ವಲ್ಪ ನಡು ಭಾಗಿಸಿ, "ಖುದಾ ಹಫೀಜ್" ಅಂತಾರೆ.

ಇನ್ನ ಕೆಲವೊಮ್ಮೆ ಪರಸ್ಪರರು ಎದುರಾದಾಗ, ಹಸ್ತಲಾಘವ ಮಾಡ್ಕೊಂಡು ಮಾತು ಆರಂಬಿಸ್ತಾರೆ, ಅದೇ ಇನ್ನೂ ಕೆಲವರೋ (ಕ್ರಿಶ್ಚಿಯನ್ನರು?) ಪರಸ್ಪರ ಕೆನ್ನೆಯ ಮೇಲೆ ಮೆಲ್ಲಗೆ, ಲಘುವಾಗಿ ಒಂದೊಂದು ಮುತ್ತು ಹಂಚಿ ಕೊಂಡು, ಶುಭಾಷಯ ಹೇಳ್ಕೊಂತಾರೆ.

ಇದಕ್ಕೆಲ್ಲಾ ಏನು ಅರ್ಥ? ಇವರೆಲ್ಲಾ ಯಾಕಿಂಗೆ ಮಾಡ್ತಿದ್ದಾರೆ? ಅದು ಹೊರಗಿನ ವ್ಯಕ್ತಿಗೆ ಕೂಡಲೇ ಆರ್ಥ ಆಗಲಿಕ್ಕೆ ಇಲ್ಲ. ಆದ್ರೆ ಅದನ್ನ ಅನುಸರಿಸ್ತಿರೋವ್ರಿಗೆ ತಕ್ಷಣ ಅರ್ಥ ಆಗುತ್ತೆ. 
ಮೊನ್ನೆ ಒಂದ್ಸಾರಿ ಸಕತ್ ಹಲ್ಲು ನೋವು ಬಂದಿತ್ತು, ಡೆನ್ಟಿಸ್ಟ್ ಹತ್ರ ಹೋಗಿದ್ದೆ, ನನ್ನ ಹೆಸರು ಕೇಳಿದ್ರು ಹೇಳ್ದೆ, ಆಮೇಲೆ ಮಾತು ಹೇಗೆ ಆರಂಬಿಸೋದು? ನಾನು ಯೋಚಿಸ್ತಾ ಇದ್ದೆ ಈಗ ಇವರು ನನ್ನ ಏನು ಕೇಳ್ತಾರೆ ಅಂತ. "ಸಾರೀ ವೀ ವೋನ್ಟ್ ಶೇಕ್ ಹ್ಯಾಂಡ್ ಎನಿ ಮೋರ್" ಅಂದ್ರು, ಹೀಗ ಎಲ್ಲ ಕಡೆ ಹಂದೀ ಜ್ವರದ ಭಯ, ಅದಕ್ಕೆ ಹೀಗೇ ಅಂತ ಗೊತ್ತಾದ್ಮೇಲೆ, ಸರಿ ಬಿಡಿ ಇಬ್ಬರಿಗೂ ಒಳ್ಳೇದು ಅಂತ ಸುಮ್ಮನೆ ಅವರು ತೋರಿಸಿದ ಕುರ್ಚಿಯ ಮೇಲೆ ಕುಳಿತೆ. ಆಮೇಲೆ ನಡೆದದ್ದು ಹೀಗ ಬೇಡ.

ಭಾಷೆ ಇಬ್ಬರ ನಡುವಿನ ಸಂಪರ್ಕಕ್ಕೆ ಉಪಯೋಗ ಆಗುತ್ತದಲ್ಲಾ, ಹಾಗೇನೇ, ಅದು ನಿಧಾನಕ್ಕೆ ವಿಷಯವನ್ನ ಒಟ್ಟು ಹಾಕಿ (ಕ್ರೂಡೀಕರಿಸಿ) ಕೊಳ್ತಾ ಹೋಗುತ್ತೆ. ಆಗಲೇ ಭಾಷೆಗೂ ಒಂದು ಭೂಷಣ. ಒಂದು ಗುಂಪಿನ ಜನ ಹೆಚ್ಚು ಹೆಚ್ಚು ವಿಚಾರ ವಿನಿಮಯ ಮಾಡ್ಕೊಳ್ತಾ ಹೋದಂತೆ ಅಲ್ಲಿ ಹೆಚ್ಚೆಚ್ಚು ಆಲೋಚನೆಗಳೂ ಸೃಷ್ಟಿ ಆಗ್ತಾ ಹೋಗ್ತವೆ, ಎಷ್ಟೇ ಆದರು ಮನುಷ್ಯ ಪ್ರಾಣಿ ಅತೀ ಬುದ್ದಿ ಜೀವಿ. ಆಲೋಚನೆಗಳು ನಂತರ ಹವ್ಯಾಸಗಳಾಗುತ್ತೆ, ಹವ್ಯಾಸಗಳು ಆಚರಣೆಗಳಾಗ್ತಾವೆ. ಹೀಗೆಯೇ ಬರ ಬರುತ್ತಾ ಒಂದು ಸಂಸ್ಕೃತಿ ಬೆಳಿತಾ ಹೋಗುತ್ತೆ. ಹೀಗಾಗಿಯೇ ಹೇಳೋದು, ಒಂದು ಭಾಷೆ ಒಂದು ಸಂಸ್ಕೃತಿಯನ್ನ ಪ್ರತಿನಿಧಿಸುತ್ತೆ.

ಮನುಷ್ಯ ತರ್ಕ ಮಾಡಿ ತೀರ್ಮಾನಗಳನ್ನ ಮಾಡೋಕ್ಕೆ ಆರಂಬಿಸಿದಾಗಿನಿಂದ ಇಲ್ಲಿಯವರಗೆ ಸರಿ ತಪ್ಪು ಗಳನ್ನ ಸಮಂಜಸವಾಗಿ ತಿಳ್ಕೊಂಡು ಬಂದಿದ್ದೇ ಹಾಗಿದ್ರೆ ಈಗಿನ ಪೀಳಿಗೆ ಒಂದೇ ಒಂದೂ ತಪ್ನ್ನೂ ಮಾಡಬಾರದಿತ್ತು. ತಪ್ಪುಗಳನ್ನ ಹುಡ್ಕೊಕ್ಕೇ ಆಗಬಾರದಾಗಿತ್ತು. ಆದ್ರೆ ಹಾಗೆ ಆಗ್ಲಿಲ್ಲ/ಆಗಿಲ್ಲ/ಆಗಲ್ಲ! ದಿನ ಬೆಳಗಾದ್ರೆ ಒಂದಲ್ಲಾ ಒಂದು ಹೊಸ ಪರೀಕ್ಷೆ/ಸಮಸ್ಯೆ ನಾವು ಎದುರಿಸ ಬೇಕಾಗುತ್ತೆ. 

ಕೆಲ್ವಬ್ರಿಗೆ ಸರಿ ಅನ್ಸಿದ್ದು ಮತ್ತೆ ಕೆಲ್ವಬ್ರಿಗೆ ತಪ್ಪು ಅನ್ಸುತ್ತೆ. ಮಾನವ ಎಷ್ಟೇ ನಾಗರೀಕತೆ ಕಲ್ತ್ರುನೂ ಸರಿ ಯಾವ್ದು, ತಪ್ಪು ಯಾವ್ದು ಅಂತಾನೆ ನಮಗೆ ಇನ್ನೂ ತಿಳ್ದಿಲ್ಲಾ ಅಂತಾಗ್ತದೆ. ಅಥವಾ ಇನ್ನೇನು ಎಲ್ಲಾ ತಿಳ್ಕೋಲ್ಳೋ ದಿನ ಬಂದೇ ಬಿಡ್ತು ಅಂತಾನೂ ಯಾರೂ ಹೇಳಕಾಗಲ್ಲ. ಒಮ್ಮೆ ಸರಿ ಅನ್ನಿಸಿದ ವಿಷಯವೇ ಇನ್ನೊಮ್ಮೆ ತಪ್ಪು ಅಂತಲೂ ಅನ್ನಿಸ್ಬೌದು. 

ಸಮಾಜದಲ್ಲಿ, ಸರಿ ಯಾವ್ದೂ, ತಪ್ಪು ಯಾವ್ದೂ ಅಂತ ತೀರ್ಮಾನ ಮಾಡೋದೇ ಒಂದು ಭ್ರಮೆ. ಅಥವ ಇಂತಹ ಒಂದೊಂದು ಭ್ರಮೆಯ ಸೃಷ್ಟಿ ಮಾಡೋ ಒಂದು ಕಲೆ. ಅದು ವಿಜ್ಞಾನವೇ ಆಗಿರಲಿ, ವೇದವೇ ಆಗಿರಲಿ, ಜೋತಿಷ್ಯಾಸ್ತ್ರವೇ ಅಥವಾ ಇನ್ನಾವುದೋ ಮೂಡ ನಂಬಿಕೆಯೇ ಆಗಿರಲಿ. ಆ ಕ್ಷಣಕ್ಕೆ , ಆ ಜಾಗದಲ್ಲಿ ಹೆಚ್ಚು ಜನಕ್ಕೆ ಸರಿ ಅನ್ನಿಸಿದ್ರೆ ಅದೇ ಸರಿ, ಹೆಚ್ಚು ಜನಕ್ಕೆ ಅದು ತಪ್ಪು ಅನ್ನಿಸಿದ್ರೆ ಅದು ತಪ್ಪು ಅಷ್ಟೇ. ಹಿಂದೆ ಸರಿ ಅಂತ ಒಪ್ಕಂಡವ್ನು ಇವತ್ತು ಅದೇ ವಿಷಯ ತಪ್ಪು ಅಂತ ವಾದಿಸಿರೋ ದೃಶ್ಯಗಳು ಲೆಕ್ಕಕ್ಕಿಲ್ಲದಷ್ಟು ಸಿಕ್ತಾವೆ. ಹಾಗಾಗಿ, ಯಾವ್ದೂ ಸರಿಯಲ್ಲ. ಯಾವ್ದೂ ತಪ್ಪೂ ಅಲ್ಲ!

ಇಲ್ಲಿ ವಿಷಯವನ್ನ ವಿಜ್ಞಾನದ ಮೂಲಕ ಅಳಿಯೋರು ತಪ್ಪು ತಿಳಿಬಾರದು. ಏಕೆಂದರೆ ವಿಜ್ಞಾನದಲ್ಲಿಯೂ ಅನೇಕ ತಪ್ಪು ನಿರ್ಣಯಗಳು ಆಗಿವೆ, ಇನ್ನೂ ಆಗ್ತಿವೆ. ಪ್ರಯೋಗ ಮಾಡೀನೇ ಎಲ್ಲ ತಿಳ್ಕೊಲ್ತೀವಿ ಅನ್ನೋವ್ರ ವಿರೋಧ ನನಗೆ ಬೇಕಿಲ್ಲ. ಅಂತವರ ವಿರೋಧಿಯೂ ನಾನಲ್ಲ. ವಿಜ್ಞಾನದಿಂದಲೂ ನಾವು ನಮ್ಮ ಜೀವನ ಮಾದರಿಯನ್ನ ಸಾಕಷ್ಟು ಸುಧಾರಿಸಿ ಕೊಂಡಿದ್ದೇವೆ. ಆಗಂತ ಅದರಿಂದ ಆಗ್ತಿರೋ ಮಾರಕ ಬೆಳವಣಿಗೆಗಳೇನೂ ಸಾಧಾರಣ ಅಲ್ಲ. ಭವಿಷ್ಯವನ್ನ ಸಾಕಷ್ಟು ಬೀಕರವಾಗಿಯೂ ಮಾಡ್ಕಂದಿದ್ದೀವಿ!!! ಇದರ ಚರ್ಚೆ ಅವರವರ ಪ್ರೌಡಿಮೆಗೆ ಬಿಟ್ಟ ವಿಚಾರ.

ಕಲಿಕೆ ಅನಂತ. ಆಗಂತ, ಏನು ತಿಳ್ಕೊಳ್ಳೋದು ಬಿಡು, ಎಷ್ಟು ಕಲಿತರೂ ಕಲಿಯೊಕ್ಕೆ ಇನ್ನೂ ಇರುತ್ತಂತೆ. ಅನ್ಗಿದ್ಮೇಲೆ ಏನನ್ನೂ ಕಲಿಯೋದೇ ಬೇಡ ಅನ್ನೋಕಾಗುತ್ತದೆಯೇ? ಕಲಿಕೆ ಅನ್ನೋದು ನಮ್ಮ ಮನಸ್ಸಿನ ಮೇಲೆ ನಾವೇ ಹೇರಿ ಕೊಳ್ಳೋ ಒಂದು ಒರೆ ಆಗಬಾರದು. ಅದು ಒಂದು ಸಿಹಿ ಅನುಭವ ಆಗಿರಬೇಕು. ಹೊಸತನ ಇರ್ಬೇಕು.

ಮುಂದುವರೆಯುತ್ತದೆ...

blogspot add widget