ಬುಧವಾರ, ನವೆಂಬರ್ 18, 2009

ಕಡ್ಡಿ, ಕಡ್ಡಿನೇ ಇದೆ, ಹೊಸ ಚಿಗುರೇ ಬಂದಿಲ್ಲಾ?

ಹವ್ಯಾಸಕ್ಕೆ ಇರ್ಲಿ ಅಂತ ಇನ್ನೊಂದು ಕೂತೂಹಲವಾದ ಕಾರ್ಯದಲ್ಲಿ ನನ್ನನ್ನ ನಾನು ತೊಡಗಿಸ್ಕೋಡ್ಡಿದ್ದೀನಿ. ಆದು ಏನೂ ಅಂತ ನಿಮ್ಗೆಲ್ಲ ಇಷ್ಟರಲ್ಲೇ ತಿಳಿಸ್ತೀನಿ. ಈ ನಡುವೆ ಹೊಸ ಬರಹವನ್ನ ಬರಿಯೊಕ್ಕಾಗ್ಲಿ ಅಥ್ವ ನಿಮ್ಮಗಳ ಬರಹಗಳನ್ನ ಓದೋದಕ್ಕಾಗ್ಲಿ ನನಗೆ ಪುರುಸೊತ್ತಾಗ್ತಾ ಇಲ್ಲ. ಆದ್ರೆ ಬಿಡುವು ಮಾಡ್ಕೋಂಡು ಮುಂದಿನ ಹದಿನೈದು ದಿನಗಳಲ್ಲಿ ಬ್ಲಾಗ್ನಲ್ಲಿ ಯಥಾ ಪ್ರಕಾರ ಕಾಣಿಸ್ಲೋಳ್ತೀನಿ. ಇಷ್ಟು ಮಾತ್ರ ಹೇಳಿ ಹೋದ್ರೆ ಹೇಗೆ? ಅದಕ್ಕೇಂತ ಈಗಾಗ್ಲೇ ಇಂತಹ ಒತ್ತಡದ ಸಂದರ್ಭಗಳಿಗೆ ಇರ್ಲಿ ಅಂತ ಬರೆದಿಟ್ಟಿದ್ದ ಬರಹವೊಂದನ್ನ ಇಲ್ಲಿ ಇವತ್ತು ಹಾಕಿರ್ತೀನಿ. ಅಮ್ಮ ಅಪ್ಪನ ನಡುವೆಯ ಸಂಭಾಷಣೆಯೊಂದಿಗೆ ಬರಹ ಆರಂಬವಾಗುತ್ತೆ.
~~~~ (*) ~~~~
ಮನೆ ಹಳೆದಾಯ್ತು, ಬೇಗ ಹೊಸ್ಮನೆ ಕಟ್ಸೋ ವ್ಯವಸ್ಥೆ ಮಾಡಿ.

ಆಯ್ತು, ಮುಂದಿನ ವರ್ಷದಿಂದ ಮನೆ ಕಟ್ಸಾಣ, ಈ ವರ್ಷನೇ ಬೇಡ!

ಮನೆ ಕಟ್ಸಿದ್ರೆ, ಇಲ್ಲಿ ಕಟ್ಸೋದು ಬೇಡ ಮತ್ತೆ. ಕಣದಲ್ಲಿ ಕಟ್ಸಣ, ಇಲ್ಲಿ ಜಾಗ ಸಾಕಾಗಲ್ಲ.

ಆಯ್ತು, ಹೊಸ್ಕಣದಲ್ಲಿ ನಮ್ಮ ಜಾಗ ಅಳತೆ ಮಾಡ್ಸಿ ಕಟ್ಸಿದ್ರಾಯ್ತು.

ಹೀಗೇ ಕಾಲ ಕಳ್ದು, ಒಂದು ಶುಭದಿನ ಮನೆ ಕಟ್ಸೋಕ್ಕೆ ಕೆಲಸ ಶುರು ಮಾಡಿದ್ರು. ಅಪ್ಪನಿಗೆ ಹಣದ ಬಗ್ಗೆ ಸ್ವಲ್ಪ ಆತಂಕ ಇದ್ರೂನೂ ಉತ್ಸಾಹದಿಂದಲೇ ಮನೆ ಕಟ್ಸೋದಕ್ಕೆ ತಕ್ಷಣಕ್ಕೆ ಬೇಕಿದ್ದ ಇಟ್ಟಿಗೆ, ಕಲ್ಲು, ಸಿಮೆಂಟು ಒಂದೊಂದೇ ವ್ಯವಸ್ಠೆ ಮಾಡೋದಕ್ಕೆ ಓಡಾಡ್ತಾ ಇದ್ರು.

ಆಗ ನನ್ನ ಜವಾಬ್ದಾರಿ ಏನಪ್ಪಾ ಅಂದ್ರೆ, ಊಟದ ಸಮಯ ಒಂದ್ಬಿಟ್ಟು, ಉಳ್ದಾ ದಿನ ಪೂರ್ತಿ ಕಣದಲ್ಲೇ ಇರ್ಬೆಕಿತ್ತು. ಎನಾದ್ರೂ ಕಳ್ಳತನ ಹಾಗುತ್ತೆ ಅನ್ನೋ ಯೋಚ್ನೆ ಇದ್ದಿದ್ದರಿಂದ, ಈ ರೀತಿ ಮಾಡ್ಬೇಕಾಗಿತ್ತು. ಆದ್ರೆ ರಾತ್ರಿ ನಾನು ಮನೇಲೇ ಇರ್ತಿದ್ದೆ, ಕಣದಲ್ಲಿ ಯಾರಾದ್ರು ಬೇರೆಯವರನ್ನ ಮಲಗಿಲಿಕ್ಕೆ ವ್ಯವಸ್ಠೆ ಮಾಡಿದ್ರು. ಬೇಸಿಗೆ ರಜಾ ಪೂರ್ತಿ ನಾನು ಕಣದಲ್ಲೇ ಕಳ್ದೆ.

ಈ ರೀತಿ ಇರ್ಬೇಕಾದ್ರೆ, ಒಂದಿನ ನಮ್ಮ ಹಳೇ ಮನೆ ಇತ್ತಲಲ್ಲಿ ಇದ್ದ ಕನಗಲ ಹೂವಿನ ಗಿಡವನ್ನ ನಾನು ನಮ್ಮ ಹೊಸ್ಮನೆ ಹತ್ರಾನು ಬೆಳಸ್ಬೇಕು ಅಂತ ಯೋಚ್ನೆ ಬಂತು. ಯಾಕಂದ್ರೆ ಹೊಸಮನೆಗೆ ಹೋದ್ಮೇಲೆ ಪೂಜೆಗೆ ಹೂವು ಅಂತ ಮತ್ತೆ ಹಳೇ ಮನೆಗೆ ಬರೋದು ಬೇಡ ಅಂತ.

ಅಮ್ಮ, ಕನಗಲ ಗಿಡನ ಹೊಸ್ಮನೆ ಹತ್ರನೂ ಬೆಳಿಸ್ಬೇಕು, ಹೊಸ್ಮನೆಗೆ ಹೋದ್ಮೇಲೆ ನಮಿಗೆ ಹೂವಿನ ಚಿಂತೆ ಇರಲ್ಲ.

ಹ್ಞೂ, ಅದಕ್ಕೇನಂತೆ ಈಗ ಇತ್ತಲಲ್ಲಿ ಇದೆಯಲ್ಲ ಅದೇ ಗಿಡದ ಒಂದೆರ್ಡು ರಮ್ಬೇಗಳನ್ನ ಕತ್ರಿಸ್ಕೊಂದು ಹೋಗಿ ಅಲ್ಲಿ ಹೊಸ್ಮನೆ ಕಣದಲ್ಲಿ ನೆಡು.

ಅಮ್ಮಾ , ಬರೀ ಕಡ್ಡಿ ನೆಟ್ರೆ ಸಾಕ? ಅದುನ್ನ ಪ್ಯಾಕೆಟ್ ಮಾಡಿ ನೆಡೋದಲ್ವ? ಬೇರು, ಬೀಜ ಏನೂ ಬೇಡ್ವ?

ಹೇ, ಇದನ್ನೆಲ್ಲಾ ಪ್ಯಾಕೆಟ್ ಯಾಕ್ಮಾಡ್ತೀಯ? ಕಡ್ಡಿನೇ ಸಾಕು, ಸ್ವಲ್ಪ ನೀರಾಕ್ತಾ ಇರು ಸಾಕು.

ಆಯ್ತು ಸರಿ ಇವತ್ತೇ ಗಿಡ ನೆಡ್ತೀನಿ.

ಇತ್ತಲಲ್ಲಿ ಒಂದೆರ್ಡು ತೆಳ್ಳನೆಯ ಉದ್ದನೆಯ ಕನಗಲ ರಮ್ಬೇಗಳನ್ನ ಕತ್ತರಿಸ್ಕಂದೆ, ತಗಂಡು ಹೊಸ್ಮನೆ ಕಣಕ್ಕೆ ಬಂದೆ. ಈಗ ಇದನ್ನ ಹೇಗೆ ನೆಡೋದು?

ನಮ್ಮನೆ ಕೆಲ್ಸಕ್ಕೆ ಒಬ್ಬ ಹೆಣ್ಮಗ್ಳು ಬರ್ತಿದ್ರು. ಅವ್ರ ಗಂಡನಿಗೆ ಒಂದು ಆಪರೇಷನ್ ಹಾಗಿತ್ತು. ಹಾಗಾಗಿ ಆಯಪ್ಪ ಏನೂ ಕೆಲಸ ಮಾಡ್ತಿರ್ಲಿಲ್ಲ. ಬರೀ ಅವ್ರಿವ್ರ ಮನೆ ಮುಂದೆ ಟೈಮ್ ಪಾಸ್ ಮಾಡ್ತಿದ್ದ. ಈಗ ಅವ್ನ ಹೆಂಡ್ತಿ ನಮ್ಮ ಹೊಸ್ಮನೆ ಕೆಲ್ಸಕ್ಕೆ ಬರ್ತಿದ್ರಿಂದ ಯಾವಾಗ್ಳೂ ಅಲ್ಲೇ ಕಣದಲ್ಲಿ ಇರ್ತಿದ್ದ. ಯಾರದ್ರೂ ಮಾತಾಡಕ್ಕೆ ಸಿಕ್ಕೇ ಸಿಕ್ತಾರೆ ಅಂತ. ನನಿಗೆ ಆಯಪ್ಪ ಯಾವಾಗ್ಲು "ಸಾವ್ಕಾರ" ಅಂತ ಕರೀತಿದ್ದು. ಆಯಪ್ಪನ ಹೆಸ್ರು "ಮೂರ್ತ್ಯಪ್ಪ". ನಾನು "ಮೂರ್ತ್ಯಪ್ಪ" ಅಂತಾನೆ ಕರೀತಿದ್ದೆ.

ಮೂರ್ತ್ಯಪ್ಪ, ನಮ್ಮ ಹಳೇ ಮನೆ ಇತ್ಲಲ್ಲಿ ಇರೋ ಕನಗ್ಲ ಗಿಡದ ಕಡ್ಡಿ ಇವು. ಈ ಕಡ್ಡಿಗಳು ಚಿಗುರೋಡ್ದು, ಗಿಡ ಹಾಗ್ತಾವಂತೆ, ಇಲ್ಲಿ ನೀರೂ ಹತ್ರದಲ್ಲೇ ಇದೆ, ಅದಕ್ಕೆ ಇಲ್ಲೇ ನೆಡ್ತೀನಿ. ಹಾಗೇ ಇದು ಕರಿಬೇವಿನ ಗಿಡ, ಇದನ್ನು ಇಲ್ಲೇ ನೆಡ್ತೀನಿ.

ಅಲ್ಲಾ ಸಾವ್ಕಾರಾ, ಒಂದು ಕಡಿ ನೆಡು ಸಾಕು, ನಿಮ್ದೊಂದು ಮನೆಗೆಲ್ಲ ಎಷ್ಟು ಗಿಡ ಬೇಕು? ಎಷ್ಟು ಹೂವು ಬೇಕು? ಮತ್ತೆ ಹೂವಿನ ಗಿಡ, ಕರಿಬೇವಿನ ಗಿಡದ ನಡ್ವೆ ಸ್ವಲ್ಪ ಜಾಗ ಬಿಡಿ. ಅವು ಬೆಳ್ದು ದೊಡ್ದವಾದ್ಮೇಲೆ ಅವಕ್ಕೆ ಇನ್ನೂ ಜಾಗ ಬೇಕಾಗುತ್ತೆ. ನಿಮ್ಮ ಹಳೇ ಮನೆ ಹಿಂದೆ ಇರೋ ಗಿಡನೆ ನೋಡಿ, ಈಗ ಎಷ್ಟು ದೊಡ್ಡದಾಗಿದೆ ಅಂತ.

ಆತು ಮೊರ್ತ್ಯಪ್ಪ ಸ್ವಲ್ಪ ಜಾಗ ಬಿಡ್ತೀನಿ. ಈ ಕಡ್ಡಿಗಳು, ಚಿಗುರೋಡಿಯೋದೆ ನಂಗೆ ಡೌಟು, ಅದಿಕ್ಕೆ ಈ ಎರಡು ಕಡ್ಡಿಗಳನ್ನ ನಾಲ್ಕು ಚಿಕ್ಕ ಚಿಕ್ಕ ಕಡ್ಡಿ ಮಾಡಿ, ಒಂದೊಂದತ್ರ ಎರಡೆರಡು ಕಡ್ಡಿ ನೆಡ್ತೀನಿ.

ಅಯ್ಯೋ ಬೇಡ ಸಾವ್ಕಾರಾ, ಒಂದೇ ಕಡ್ಡಿ ನೆಡಿ ಸಾಕು. ಅದಕ್ಕಿಂತ ಚಿಕ್ಕದಾಗಿ ಕತ್ತರಿಸ್ಬೇಡಿ. ಅದು ಉಪ್ಯೊಗಕ್ಕೆ ಬರಲ್ಲ.

ನಾನು ಮೂರ್ತ್ಯಪ್ಪನ ಮಾತನ್ನ ಲೆಕ್ಕಕ್ಕೆ ಇಟ್ಕಲ್ದೆ, ಎರಡನ್ನು ಕತ್ತರ್ಸಿ ನಾಕು ತುಂಡು ಮಾಡ್ದೆ. ಒಂದಡಿ ಆಳದ ಮೂರು ಗುಂಡಿ ತಗ್ದೆ, ಅದ್ರಲ್ಲಿ ಒಂದಿಷ್ಟು ಕಪ್ಪು ಮಣ್ಣು, ಕೆಂಪು ಮಣ್ಣು, ಒಂದಿಷ್ಟು ತಿಪ್ಪೆ ಗೊಬ್ರ ಹಾಕಿ ರಾಡಿ ಮಾಡ್ದೆ. ಒಂದು ಗುಣಿಗೆ ಎರಡು ಕಡ್ಡಿ, ಅಂದ್ರಂತೆ ಮೂರು ಗುಣಿಲಿ ನಾಲ್ಕು ಕಡ್ಡಿ ಮತ್ತೆ ಒಂದು ಕರಿಬೇವಿನ ಗಿಡ ಅಂತ ನನ್ನ ಪ್ಲ್ಯಾನ್ ಇತ್ತು.

ಗುಣಿಯ ಮದ್ಯೆದಲ್ಲಿ ಹೂವಿನ ಗಿಡದ ಎರಡೆರಡು ಕಡ್ಡಿ ಇಟ್ಟು, ಮುಚ್ಚಿದೆ. ಸಪೋರ್ಟಿಗೆ ಇರ್ಲಿ ಅಂತೇಳಿ ಇನ್ನೊಂದು ಬೇರೆ ಜಾತಿಯ ಒಣ ಕಂಡಿನೂ ಅದ್ರ ಜೊತೆ ನೆಟ್ಟಿದ್ದೆ. ಇದೆ ರೀತಿ ಕರಿಬೇವಿನ ಗಿಡಕ್ಕೂ ಮಾಡಿದ್ದೆ.

ಅಲ್ಲಾ ಸಾವ್ಕಾರಾ. ಅದಿನ್ನೂ ಬೇರಿಲ್ಲದ, ಎಲೆಯಿಲ್ಲದ ಕಡ್ಡಿ ಅಷ್ಟೇ. ಅದಕ್ಕೆ ಬೇರ್ಬೇರೆ ಮಣ್ಣು, ತಿಪ್ಪೆ ಗೊಬ್ರ ಎಲ್ಲಾ ಯಾಕೇ? ಸುಮ್ನೆ ಸ್ವಲ್ಪ ನೆಲ ಹಸಿ ಮಾಡಿ ಕಡ್ಡಿ ಸಿಗ್ಸಿ ಸಾಕು. ಕರಿಬೇವಿನ ಗಿಡಕ್ಕೂ ಅಷ್ಟೇ, ಅದು ಇನ್ನೂ ಹೊಸ ಬೇರು ಬರ್ಬೇಕು. ಅಲ್ಲಿತಂಕಾ ಅದಕ್ಕೆ ನೀರು ಮತ್ತೆ ಸ್ವಲ್ಪ ಮಣ್ಣು ಸಾಕು,

ಎರಡು ದಿನ ಬಿಟ್ಟು ಬಂದೆ, ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ಅಯ್ಯೋ ಕಡ್ಡಿ ಒಣಗಿ ಹೋಗಿದೆ ಅನ್ಸುತ್ತೆ. ಮೂರ್ತ್ಯಪ್ಪ ನೀನೆಳಿದ್ದು ಸರಿ, ನಾನು ಕಡ್ಡಿನ ಅಷ್ಟು ಚಿಕ್ಕದಾಗಿ ತುಂಡು ಮಾಡ್ಬಾರ್ದಾಗಿತ್ತು ಅನ್ಸುತ್ತೆ. ನಾನು ಮತ್ತೆ ಬೇರೆ ಕಡ್ಡಿ ತಂದು ನೆಡ್ತೀನಿ.

ಅಯ್ಯೋ ಸಾವ್ಕಾರಾ, ಅದಕ್ಕಿನ್ನೂ ಎರಡೇ ಎರಡು ದಿನ ಹಾಗಿದೆ, ಈಗ್ಲೇ ಹೇಗೆ ಚಿಗುರು ಬರುತ್ತೆ? ಒಂದು ವಾರನಾದ್ರೂ ಟೈಮ್ ಕೊಡ್ರಿ ಅದುಕ್ಕೆ. ಅದು ಮೊದ್ಲು ನೆಲದ ಒಳ್ಗೆನೇ ಸಣ್ಣ ಸಣ್ಣ ಬೇರು ಬರುತ್ತೆ. ಆ ಬೇರು ಬಂದಾದ ಮೇಲೆ ಸಣ್ಣ ಚಿಗುರೆಲೆ ಕಾಣ್ಸುತ್ತೆ. ಆ ಗಣ್ಣು ಇದ್ದಾವಲ್ಲ? ಅಲ್ಲೇ ಚೂರು ಹಸುರು ಬಣ್ಣದ ಚಿಗುರು ಬರುತ್ತೆ ನೋಡ್ತಿರಿ.

ಅನ್ಗಂತೀಯ ಮೂರ್ತ್ಯಪ್ಪ, ಯಾವ್ದುಕ್ಕು ಕಡ್ಡಿ ಒಣಗ್ದಂಗೆ ಅದರ ತುದಿಗೆ ಆಕ್ಳ ಸಗಣಿ ತಂದು ಅಂಟಿಸ್ತೀನಿ.

ಆ ಕೆಲಸ ಬೇಕಾದ್ರೆ ಮಾಡು ಸಾವ್ಕಾರಾ.

ಬೇರೆಯವರ ಮನೆ ಮುಂದಿನ ಹೊಸ ಗಿಡಗಳಿಗೆ ಈ ರೀತಿ ಮಾಡಿದ್ದು ಗಮನಿಸಿದ್ದ ನಾನು, ಸಗಣಿನ ತಂದು ಅದೇ ರೀತಿ ಕಡ್ಡಿ ತುದಿಗೆ ಮೆತ್ತಿದೆ.

ಮತ್ತೆ ಎರಡು ದಿನ ಬಿಟ್ಟು ಬಂದು ಗಮನ್ಸಿದೆ. ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ.ಅಷ್ಟೊತ್ತಿಗೆ ಮೂರ್ತ್ಯಪ್ಪ ನನ್ನ ಹಿಂದೆ ಬಂದು ನಿಂತು ನನ್ನನ್ನೇ ನೋಡ್ತಿದ್ದ.


~~~~ (*) ~~~~


ತುಂಬ ಉದ್ದ ಆಯ್ತು, ಅದಕ್ಕೆ ಇವತ್ತಿಗೆ ಇಲ್ಲಿಗೆ ನಿಲ್ಲಿಸಿ, ಮತ್ತೆ ಮುಂದಿನ ಭಾಗವನ್ನ ಇನ್ನೊಂದಿನ ಹಾಕ್ತೇನಿ

8 ಕಾಮೆಂಟ್‌ಗಳು:

ಸುಪ್ತವರ್ಣ ಹೇಳಿದರು...

ಛೇ ! ನಿಲ್ಸೇ ಬಿಟ್ರಲ್ಲ ಸಾವ್ಕಾರಾ? ಇನ್ನು ನೀವು ಇತ್ತ ಕಡೆ ಬರೋದು ಯಾವಾಗೋ ಏನೋ? ಹೆಹ್ಹೆ.....ಸುಮ್ನೆ ತಮಾಷೆಗೆ ಅಂದೆ. Interesting ಆಗಿದೆ. ಬೇಗ ಮುಂದಿನ ಭಾಗ ಪ್ರಕಟಿಸಿ.

ಸಾಗರದಾಚೆಯ ಇಂಚರ ಹೇಳಿದರು...

ಏನು ಸಾವಕಾರ,
ನಿಲ್ಸೆ ಬಿಟ್ರಿ,
ತುಂಬಾ ಇಂಟರೆಸ್ಟಿಂಗ್ ಆಗಿದೆ

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ಆತ್ಮೀಯ ಲೋದ್ಯಶಿಯವರೇ...
ಚಿಗುರುವಡೆಯುವದಕ್ಕೆ ಇನ್ನು ಕಾಯಿಬೇಕಾ ಸಾವಕಾರರೆ, ತುಂಬಾ ಚೆನ್ನಾಗಿದೆ ಮುಂದುವರಿಸಿ.

Me, Myself & I ಹೇಳಿದರು...

ಆತ್ಮೀಯ ಸುಪ್ತವರ್ನರವ್ರೆ

ಬರ್ತೀನಿ ಬರ್ತೀನಿ, :)

ಮೆಚ್ಚುಗೆಗೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಗುರುಮುರ್ತಿಯವ್ರೆ

ನಿಲ್ಲಿಸಿಲ್ಲ ಅದು ವಿರಾಮ ಅಷ್ಟೇ. :) ಮೆಚ್ಚುಗೆಗೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಗೋಪಲಾರೆ

ಇಲ್ಲ ಕಾಯ್ಬೇಡಿ, ಬೇರು ಬರ್ತಾ ಇದೆ ಅಷ್ಟೇ.. ಇಷ್ಟರಲ್ಲೇ ಚಿಗುರು ಕೂಡ ಬರುತ್ತೆ :)

ಧನ್ಯವಾದಗಳು

ಗೌತಮ್ ಹೆಗಡೆ ಹೇಳಿದರು...

ಮುಂದ ?:)

Me, Myself & I ಹೇಳಿದರು...

ಆತ್ಮೀಯ ಗೌತಮರೆ

ಮುಂದ ಈಗ ಹಾಕಿದ್ದೀನಿ ಓದಿ ಹೇಳಿ :) ಮುಂದೆ ಓದಿ

blogspot add widget