ಭಾನುವಾರ, ಆಗಸ್ಟ್ 1, 2010

ಭೀಷ್ಮ ಹಾಗೂ ವೇದವ್ಯಾಸ

ಮಹಾಭಾರತ ಮಹಾಕಾವ್ಯವನ್ನು ಗಣೇಶನಿಗೆ ಡಿಕ್ಟೇಟ್ ಮಾಡಿದ್ದು ವೇದ ವ್ಯಾಸ ಋಷಿಗಳು ಎಂಬುದನ್ನು ಓದಿರುತ್ತೇವೆ. ಮಹಾಭಾರತದ ಪ್ರಮುಖ ಪಾತ್ರವಾದ ಭೀಷ್ಮ ಹಾಗೂ ವೇದವ್ಯಾಸ, ಈ ಇಬ್ಬರ ನಡುವಿನ ಸಂಬಂಧವೇನು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಹಸ್ತಿನಾಪುರದ ರಾಜ ಶಂತಾನು ಹಾಗೂ ಗಂಗೆ, ರಾಜದಂಪತಿಗಳ ಪುತ್ರನೇ ದೇವವ್ರತ.
.
.
.


ಸತ್ಯವತಿಗೆ ವಿವಾಹ ಪೂರ್ವದಲ್ಲಿ ಪರಶರ ಎಂಬ ಋಷಿಯ ಆಶೀರ್ವಾದದಿಂದ ವ್ಯಾಸನು ಜನಿಸಿರುತ್ತಾನೆ.

ಒಮ್ಮೆ ರಾಜ ಶಂತಾನು, ಸತ್ಯವತಿಯನ್ನು ಭೇಟಿಯಾಗುತ್ತಾನೆ. ಸತ್ಯವತಿಯ ಸೌಂದರ್ಯಕ್ಕೆ ಆಕರ್ಷಿತನಾದ ರಾಜನು ಆಕೆಯನ್ನು ತನ್ನ ಪಟ್ಟದರಸಿಯಾಗಿ ಸ್ವೀಕರಿಸುತ್ತಾನೆ.

ತನ್ನ ತಂದೆಯ ಆಸೆಯನ್ನು ನೆರವೇರಿಸುವ ಸಲುವಾಗಿ ದೇವವ್ರತನು ಹಸ್ತಿನಾಪುರದ ಸಿಂಹಾಸನವನ್ನೇ ತ್ಯಾಗಮಾಡುತ್ತಾನೆ. ಹಾಗೂ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಶಪಥಗೈಯುತ್ತಾನೆ. ಮುಂದೆ ದೇವವ್ರತನು ಭೀಷ್ಮನೆಂದು ಪ್ರಸಿದ್ದಿಯಾಗುತ್ತಾನೆ.

ರಾಜ ಶಂತಾನು ಹಾಗೂ ಗಂಗೆ ದಂಪತಿಗಳ ಪುತ್ರ ದೇವವ್ರತ ಅಂದರೆ ಭೀಷ್ಮ. ಹಾಗೂ ಶಂತಾನುವಿನ ಮತ್ತೋರ್ವ ರಾಣಿ ಸತ್ಯವತಿ(ಮತ್ಸಾಂಗದ)ಯ ವರಪುತ್ರ ವ್ಯಾಸ. ಭೀಷ್ಮರ ತಂದೆಯೂ ಹಾಗೂ ವ್ಯಾಸರ ತಂದೆಯೂ ಬೇರೇ ಬೇರೇ, ಭೀಷ್ಮರ ತಾಯಿಯೂ ಹಾಗೂ ವ್ಯಾಸರ ತಾಯಿಯೂ ಬೇರೇ ಬೇರೇ. ಆದರೂ ಭೀಷ್ಮ ಹಾಗೂ ವ್ಯಾಸ ಪರಸ್ಪರ ಸಹೋದರರು ಎನ್ನಲಡ್ಡಿ ಇಲ್ಲ. ನಿಮ್ಮದೇನಾದರೂ ಅಡ್ಡಿ ಇದೆಯೇ??

ರಾಜ ಶಂತಾನು, ಗಂಗೆ ಹಾಗೂ ಸತ್ಯವತಿ ಇವರುಗಳ ಹಿನ್ನೆಲೆ ಏನೆಂದು ವಿವರಿಸಲಾಗಿಲ್ಲ. ಇನ್ನೊಮ್ಮೆ ಯಾವಾಗಲಾದರೂ ನೋಡೋಣ.

ಕಾಮೆಂಟ್‌ಗಳಿಲ್ಲ:

blogspot add widget